ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

Public TV
1 Min Read

ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ ಮತ್ತು ಸೊಸೆಯಂದಿರ ಕಾಟ ತಾಳಲಾರದೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಬಳಿಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಯಲ್ಲವ್ವನಿಗೆ ಮೂರು ಗಂಡು ಮಕ್ಕಳು ಮತ್ತು ಆರು ಜನ ಹೆಣ್ಣು ಮಕ್ಕಳಿದ್ದು, ಆಸ್ತಿಯನ್ನು ಕಸಿದುಕೊಂಡ ಮಕ್ಕಳು ಅಜ್ಜಿಯನ್ನು ನಡು ರಸ್ತೆಗೆ ಬಿಟ್ಟಿದ್ದಾರೆ. ಮನೆ ಇಲ್ಲದೆ ಕಳೆದ ಮೂರು ದಿನದಿಂದ ಊಟ ಮಾಡದ ಅಜ್ಜಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಡಕೋಳ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *