ತಾಯಿ ಇಲ್ಲ, ತಂದೆ ಬಿಟ್ಟು ಹೋದ, ಇರೋ ಅಜ್ಜಿಗೆ ದೃಷ್ಟಿ ಸರಿಯಿಲ್ಲ- ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಬಾಲಕನಿಗೆ ಬೇಕಿದ ಶಿಕ್ಷಣ

Public TV
1 Min Read

ಹುಬ್ಬಳ್ಳಿ: ತಾಯಿ ಸಾವನ್ನಿಪ್ಪಿದ್ದಾರೆ. ತಂದೆ ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ಇರೋದು ಅಜ್ಜಿ ಮಾತ್ರ. ಆದರೆ ಅವರಿಗೆ ಸರಿಯಾಗಿ ದೃಷ್ಟಿ ಕಾಣುವುದಿಲ್ಲ. ಅಜ್ಜಿಗೆ ಆಪರೇಷನ್ ಮಾಡಿಸಿ ಮೈತುಂಬಾ ಸಾಲ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ಕುಟುಂಬ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.

ಅಜ್ಜಿಯ ಕೈ ತುತ್ತು ತಿಂದು ಬೆಳೆಯುತ್ತಿರುವ ಬಾಲಕನ ಹೆಸರು ಮಂಜುನಾಥ್ ಠಾಕೋಲಿ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. ಕಳೆದ 15 ವರ್ಷಗಳ ಹಿಂದೆ ಈ ಬಾಲಕನ ತಾಯಿ ಸಾವನ್ನಪ್ಪಿದ್ದಾರೆ. ತಾಯಿ ಸಾವಿನ ಬಳಿಕ ತಂದೆ ಕೂಡ ಮಗನನ್ನು ಬಿಟ್ಟು ಹೋದವರು ಮತ್ತೆ ಇಲ್ಲಿವರೆಗೂ ಹಿಂದಿರುಗಿ ಬಂದಿಲ್ಲ.

ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು, ತಂದೆಗೆ ಬೇಡವಾದ ಮಗನಾಗಿ ಮಂಜುನಾಥ್ ಠಾಕೋಲಿ ಅನಾಥನಾಗಿ ಬಿಟ್ಟಿದ್ದನು. ಆದರೆ ಅಜ್ಜಿ ಸರೋಜಮ್ಮ ಅವರು ಮೊಮ್ಮಗನಿಗೆ ಆಸರೆಯಾದರೂ. ಅವರಿವರ ಮನೆ ಕೆಲಸಗಳನ್ನು ಮಾಡಿಕೊಂಡು ಮೊಮ್ಮಗನಿಗೆ ವಿದ್ಯಾಭ್ಯಾಸ ಕೊಡಿಸಿ ಆತನ ಆರೈಕೆ ಮಾಡಿಕೊಂಡು ತಮ್ಮ ಪ್ರತಿನಿತ್ಯದ ಜೀವನವನ್ನು ಸವೆಸುತ್ತಿದ್ದಾರೆ.

ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಿರುವ ಮಂಜುನಾಥ್ ಠಾಕೋಲಿ ಕುಂದಗೋಳದ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದಿನಲ್ಲಿ ಸದಾ ಮುಂದಿದ್ದು, ಎಲ್ಲಾ ಶಿಕ್ಷಕರಿಗೂ ನೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಆದರೆ ಅಜ್ಜಿ ಸರೋಜಮ್ಮ ಅವರು ದೃಷ್ಠಿ ದೋಷದಿಂದ ಬಳಲುತ್ತಿದ್ದರು. ಆದ್ದರಿಂದ ಸಾಲ ಮಾಡಿ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಕಣ್ಣಿನ ಚಿಕಿತ್ಸೆಗೆ ಮಾಡಿದ ಸಾಲವನ್ನು ತೀರಿಸಲಾಗದೇ ಈಗ ಹೊಟ್ಟೆಗೆ ಅನ್ನ ನೀರು ಇಲ್ಲದೇ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಅಜ್ಜಿ ತಮ್ಮ ಕೈಯಲ್ಲಿ ಆದಷ್ಟು ಇಲ್ಲಿಯವರೆಗೂ ಮೊಮ್ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದು, ಮುಂದಿನ ಓದಿಗೆ ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ನೊಂದ ಹೃಯದ ನಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಕೇಳಿಕೊಂಡು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *