60 ವರ್ಷದ ಅಂಧ ಕಲಾವಿದ ಬಾಳಲ್ಲಿ ಬೇಕಾಗಿದೆ ಚಿಕ್ಕ ಸೂರಿನ ಬೆಳಕು

Public TV
1 Min Read

ಬೀದರ್: ಸುಮಾರು 60 ವರ್ಷಗಳಿಂದ ಜನಪದ ಸಂಸ್ಕೃತಿಯನ್ನು ಎಲ್ಲಡೆ ಪಸರಿಸುತ್ತಿರುವ ನಮ್ಮ ಪಬ್ಲಿಕ್ ಹೀರೋ ಕೃಷ್ಣಪ್ಪ ತಿಪ್ಪಣ್ಣ ಧರ್ಗೆ ಅವರು ಇಂದಿಗೂ ಬೀಳುವ ಹಂತದಲ್ಲಿರುವ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ಈ ಗುಡಿಸಲು ಇಂದೋ ನಾಳೆ ಬೀಳುವ ಹಂತದಲ್ಲಿದ್ದು, ಮನೆಯ ಸದಸ್ಯರೆಲ್ಲರೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಸವಾಗಿದ್ದಾರೆ.

ಕೃಷ್ಣಪ್ಪ ಅವರು ಮೂಲತಃ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಮ್ಮಸನೂರು ಗ್ರಾಮದ ನಿವಾಸಿ. ಹೊಟ್ಟೆ ಪಾಡಿಗಾಗಿ ಬೆಳಗ್ಗೆ 6 ರಿಂದ ರಾತ್ರಿ ವರೆಗೆ ಜಿಲ್ಲದ್ಯಾಂತ ಸುತ್ತಿ ತಮ್ಮ ಕಲೆಯಿಂದ ಬಿಡುಗಾಸು ಸಂಪಾದನೆ ಮಾಡತ್ತಾರೆ. ಪುಟ್ಟ ಗುಡಿಸಲಿನಲ್ಲಿ ವಾಸ ಮಾಡಲು ಯಾತನೆಪಡುತ್ತಿದ್ದು ಯಾರಾದ್ರು ಸೂರು ನೀಡುತ್ತಾರೆ ಎಂದು ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಯಾದರೂ ಯಾವುದೆ ಪ್ರಯೋಜನವಾಗಿಲ್ಲ.

ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳಿಗೆ ಬಾಜನರಾಗಿರುವ ಕೃಷ್ಣಪ್ಪರಿಗೆ ಸರ್ಕಾರ ವಾಸಿಸಲು ಒಂದು ಮನೆಯನ್ನು ನೀಡದೇ ಅಗೌರವವನ್ನು ತೋರಿಸಿದೆ. ಈ ಕುಟುಂಬದಲ್ಲಿ ಒಟ್ಟು 5 ಜನವಿದ್ದು ಸರಿಯಾದ ಮನೆ ಇಲ್ಲದೆ, ಹಗಲು ರಾತ್ರಿ ಏನ್ನದೆ ಭಯದಲ್ಲಿ ವಾಸ ಮಾಡುತ್ತಿದ್ದಾರೆ. ಒಂದೆ ಬಾರಿಗೆ 4 ಪರಿಕರಗಳನ್ನು ಬಳಿಸಿಕೊಂಡು ಸಂಗೀತ ನುಡಿಸುವ ಜೊತೆಗೆ ಜನಪದ ಹಾಡುಳಗ ಮೂಲಕ ಸಾಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಾ ಬಂದಿದ್ದಾರೆ. ಆದರೆ ಇಂದು ಕೃಷ್ಣಪ್ಪರ ಬದುಕು ಕಷ್ಟವಾಗಿದೆ.

ಏಕತ್ತರಿ, ತಾಳ, ದಮ್ಮನಿ, ಗೆಜ್ಜೆ ಮತ್ತು ಹಾಡನ್ನು ಏಕ ಕಾಲಕ್ಕೆ ಹಾಡುವ ವಿಶೇಷ ಕಲೆಯನ್ನು ಕೃಷ್ಣಪ್ಪ ಮೈಗೂಡಿಸಿಕೊಂಡಿದ್ದಾರೆ. ಈ ಕಲೆಯನ್ನು ಪರಿಶ್ರಮದಿಂದ ಮೈಗೂಡಿಸಿಕೊಂಡಿದ್ದೆ ಹೊರೆತು ಯಾವ ಗುರುವಿನ ಮಾರ್ಗದರ್ಶನವನ್ನು ಪಡೆದಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದೇ ಎಲ್ಲ ಕಾರ್ಯಗಳಿಗೆ ಮತ್ತು ದೇವಸ್ಥಾನಗಳ ಮುಂದೆ ತಮ್ಮ ಕಲೆಯನ್ನು ಅರ್ಪಿಸುತ್ತಾ ಬಂದಿದ್ದಾರೆ. ಈ ಕಲೆಗೆ ಪತ್ನಿ ಲಕ್ಷ್ಮಿಬಾಯಿ ಕೂಡಾ ಸಾಥ್ ನೀಡುತ್ತಿದ್ದು ಪತಿಯನ್ನು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗತ್ತಾರೆ.

ಹುಟ್ಟಿದಾಗಿನಿಂದಲೂ ತಮ್ಮ ವಿಶೇಷ ಕಲೆಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತಾ ಬಂದಿರುವ ಈ ಕಲಾವಿದನ ಬದಕು ಇಂದು ಅಕ್ಷರ ಸಹ ನರಕ ಸದೃಶವಾಗಿದ್ದು ಒಂದು ಸೂರಿನ ನಿರೀಕ್ಷೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *