ಕೊನೆಗೂ ಜಾರಕಿಹೊಳಿ ಸಹೋದರರ ಪಾಲಾದ ಡಿಸಿಸಿ ಬ್ಯಾಂಕ್‌ ಗದ್ದುಗೆ – ತೊಡೆ ತಟ್ಟಿದ್ದ ಸವದಿ, ಕತ್ತಿಗೆ ಮುಖಭಂಗ

Public TV
1 Min Read

ಬೆಳಗಾವಿ: ಪೈಪೋಟಿ, ಜಟಾಪಟಿ ನಡುವೆ ಕೊನೆಗೂ ಡಿಸಿಸಿ ಬ್ಯಾಂಕ್‌ (DCC Bank) ಗದ್ದುಗೆ ಜಾರಕಿಹೊಳಿ ಸಹೋದರರ ಪಾಲಾಗಿದೆ. ಜಾರಕಿಹೊಳಿ‌ ಬ್ರದರ್ಸ್‌ ವಿರುದ್ಧ ತೋಡೆ ತಟ್ಟಿದ ಸವದಿ, ಕತ್ತಿಗೆ ಶಾಕ್ ಕೊಟ್ಟಿದ್ದಾರೆ.

ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಹದಿನಾರು ಸ್ಥಾನಗಳ ಪೈಕಿ ಒಂಬತ್ತು ಸ್ಥಾನ ಗೆಲ್ಲುವುದರ ಮೂಲಕ ಜಾರಕಿಹೊಳಿ‌ ಬ್ರದರ್ಸ್ ಕಮಾಲ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

ನಾಲ್ಕು ಸ್ಥಾನಗಳ ರಿಸಲ್ಟ್ ಬರದಿದ್ದರೂ ಜಾರಕಿಹೊಳಿ‌ ಬ್ರದರ್ಸ್ ಗೆಲುವು ಸಾಧಿಸಿದ್ದಾರೆ. ಏಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇಂದು ನಡೆದ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. ಒಂಬತ್ತು ಸ್ಥಾನಗಳನ್ನ ಗೆಲ್ಲುವುದರ ಮೂಲಕ ಜಾರಕಿಹೊಳಿ ಮತ್ತೆ ಬ್ಯಾಂಕ್‌ನ್ನು ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ.

ಮೊನ್ನೆ ಗೆದ್ದಿರುವ ರಾಜು ಕಾಗೆ, ಗಣೇಶ್ ಹುಕ್ಕೇರಿ ತಟಸ್ಥವಾಗಿ ಉಳಿದುಕೊಂಡಿದ್ದರು. ಇಂದು ಗೆದ್ದ ಮಲ್ಲಣ್ಣ ಯಾದವಾಡ ಸವದಿ ಬಣಕ್ಕೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ. ಬಣ‌‌ ಮಾಡಿಕೊಂಡು ಓಡಾಡಿದ್ದ ಲಕ್ಷ್ಮಣ ಸವದಿ ಮತ್ತು ರಮೇಶ್ ಕತ್ತಿಗೆ ಮುಖಭಂಗವಾಗಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

Share This Article