ಕಾರ್ಯಕ್ರಮದಲ್ಲಿ ನಗೆಪಾಟಲಿಗೀಡಾದ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಅವರು ನಗೆಪಾಟಲಿಗೆ ಈಡಾದ ಪ್ರಸಂಗ ಇಂದು ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂದು ಚಿಕ್ಕೋಡಿಯ ಪೋಸ್ಟ್ ಆಫೀಸ್ ನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಬಳಿಕ ಮಾತನಾಡುವ ವೇಳೆ ಅವರು ಎಡವಟ್ಟು ಮಾಡಿಕೊಂಡಿದ್ದು ಸಭಿಕರು ಒಂದು ಬಾರಿ ಅವಕ್ಕಾಗಿದ್ದಾರೆ.

ಭಾಷಣದ ವೇಳೆ ಹೊರದೇಶಕ್ಕೆ ಹೋಗಬೇಕಾದರೆ ಅವಶ್ಯವಿರುವ ವೀಸಾ ಪಡೆದುಕೊಳ್ಳಲು ಮುಂಬೈ ಹಾಗೂ ಚೆನ್ನೈಗೆ ಹೋಗಬೇಕು ಎನ್ನುವ ಬದಲು ‘ವಿಷ’ ತೆಗೆದುಕೊಳ್ಳಲು ಚೆನ್ನೈ ಅಥವಾ ಮುಂಬೈ ಗೆ ಹೋಗಬೇಕಾಗಿದೆ ಎಂದರು. ಭಾಷಣದಲ್ಲಿ ಎರಡೂ ಮೂರು ಬಾರಿ ‘ವಿಷ’ ಪಡೆಯಲು ಅಲ್ಲೇಕೆ ಹೋಗಬೇಕು ಎಂದು ಸಂಸದರು ಹೇಳಿದಾಗ ಸಭಿಕರು ತಬ್ಬಿಬ್ಬಾದರು.

ಕಾರ್ಯಕ್ರಮದ ಬಳಿಕ ಬಿಜೆಪಿಗೆ ನೀವು ಸೇರ್ಪಡೆಯಾಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಪ್ರಕಾಶ್ ಹುಕ್ಕೇರಿ ಸಿಟ್ಟಿನಿಂದ ಏನೂ ಮಾತನಾಡದೇ ತೆರಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *