ಗೋಕಾಕ್‍ನಲ್ಲಿ ಸಹೋದರರ ಸವಾಲ್!

Public TV
1 Min Read

ಬೆಳಗಾವಿ: ಗೋಕಾಕ್ ಉಪಚುನಾವಣೆ ಇದೀಗ ಸಹೋದರತ್ವದ ಮಾತೃ ಪ್ರೇಮವನ್ನು ತೂಗೊಯ್ಯಾಲೆಯಂತಾಗಿಸಿದೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸಿದ ರಮೇಶ್ ಜಾರಕಿಹೊಳಿ ಅತೃಪ್ತರಾಗಿ ಕೊನೆಗೆ ಅನರ್ಹರಾಗಿದ್ದಾರೆ. ವಿಧಿಯಿಲ್ಲದೇ ಬಿಜೆಪಿಯನ್ನು ಅಪ್ಪಿಕೊಂಡ ಇವರ ನಿರ್ಧಾರವನ್ನ ಜನ ಒಪ್ಪಿಕೊಳ್ಳಲಿ ಎಂದು ಜನಾದೇಶ ಪಡೆಯಲು ಕಾತುರರಾಗಿದ್ದಾರೆ. ಆದರೆ ಅಣ್ಣ ರಮೇಶ್ ನಾಗಾಲೋಟಕ್ಕೆ ಕಾಂಗ್ರೆಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಕಿರಿಯ ತಮ್ಮ ಲಖನ್ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.

10 ವರ್ಷಗಳ ಹಿಂದೆ ರಮೇಶ್ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿ ಸ್ಪರ್ಧಿಸಿ ಸಾವಿರಾರು ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟು 7,700 ಮತಗಳಿಂದ ತಮ್ಮನ ವಿರುದ್ಧವೇ ರಮೇಶ್ ಗೆದ್ದು ಬೀಗಿದ್ದರು. ಇದೀಗ, ಮತ್ತೆ ಸಹೋದರನ ವಿರುದ್ಧವೇ ಅಖಾಡದಲ್ಲಿ ಸೆಣಸಬೇಕಿದೆ.

ಸತೀಶ್ ಹಾಗೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಕಮಲದ ತೆಕ್ಕೆಯಲ್ಲಿದ್ದಾರೆ. ಇನೋರ್ವ ಸಹೋದರ ಭೀಮಶಿ ಜಾರಕಿಹೊಳಿ ಮಾತ್ರ ತಟಸ್ಥವಾಗಿ ಉಳಿದಿದ್ದು ಗೋಕಾಕ್ ಜನತೆಯಲ್ಲಿ ಕುತೂಹಲ ಕೆರಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *