ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಲು ಇಂದು ಮೇಯರ್ ಗೌತಮ್ ಕುಮಾರ್ ಬೈಕ್ ನಲ್ಲಿ ಹೊರಟ್ಟಿದ್ದರು. ಬೈಕ್ ನಲ್ಲಿ ರೌಂಡ್ಸ್ ಹೊರಟ ಮೇಯರ್ ಅವರಿಗೆ ಸಾಲು ಸಾಲು ಗುಂಡಿಗಳ ದರ್ಶನವಾಗಿದೆ.

ಅಧಿಕಾರಿಗಳ ಜೊತೆ ಜನರ ಸಮಸ್ಯೆ ಆಲಿಸಲು ಮೇಯರ್ ಮಲ್ಲೇಶ್ವರಂ ಮುಖ್ಯರಸ್ತೆಗಳಲ್ಲಿ ಇಂದು ಬೈಕ್ ರೈಡ್ ಹೊರಟಿದ್ದರು. ಮೇಯರ್ ಹೊರಟ 100 ಮೀ. ಅಂತರದಲ್ಲಿ ರಸ್ತೆಯೇ ಗುಂಡಿಯಾಗಿರೊ ಸತ್ಯ ಬಯಲಾಯಿತು. ಗುಂಡಿ ಕಂಡು ಮೇಯರ್ ಒಂದು ಕ್ಷಣ ಶಾಕ್ ಆದರು. ಕೂಡಲೇ ತಮ್ಮ ಜೊತೆಯಲ್ಲಿದ್ದ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಅಕ್ಟೋಬರ್ 13ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಆದೇಶ ನೀಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, ರಸ್ತೆ ಗುಂಡಿಗಳ ಬಗ್ಗೆ ಹಲವು ದೂರುಗಳ ಬಂದಿವೆ. ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ದೂರುಗಳನ್ನಾಧರಿಸಿ ಇಂದು ರಸ್ತೆ ಗುಂಡಿ ಪರಿಶೀಲನೆಗೆ ಮುಂದಾದೆ. ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಕಾರಿನಲ್ಲಿ ಸಂಚರಿಸುವದರಿಂದ ರಸ್ತೆಗುಂಡಿಗಳ ಬಗ್ಗೆ ಗೊತ್ತಾಗಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗುಂಡಿಗಳಿಂದ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಬೈಕ್ ರೌಂಡ್ಸ್ ಗೆ ಬರಲಾಗಿತ್ತು. ಇಂದು ಜನರ ನೋವು ಏನು ಎಂಬುವುದು ಅರ್ಥವಾಗಿದೆ. ಆದಷ್ಟು ಬೇಗ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದರು.

ಆದಷ್ಟು ಬೇಗ ಇಲ್ಲಿಯ ರಸ್ತೆ ರಿಪೇರಿ, ಟ್ರಾಫಿಕ್ ನಿಯಂತ್ರಿಸಿ ಎಂದು ಸಾರ್ವಜನಿರಕು ಮೇಯರ್ ಬಳಿ ಮನವಿ ಮಾಡಿಕೊಂಡರು. ಇನ್ನುಂದೆ ವಲಯವಾರು ಗುಂಡಿ ಚೆಕ್ ಮಾಡುತ್ತೇನೆ ಎಂದು ಮೇಯರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *