ರಸ್ತೆಗುಂಡಿ ಅಪಘಾತಕ್ಕೆ ಪಾಲಿಕೆಯೇ ಹೊಣೆ: ಸುಪ್ರೀಂಕೋರ್ಟ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಗ್ಗು-ಗುಂಡಿಗಳ ಸಂಖ್ಯೆ ಕಡಿಮೆ ಏನಿಲ್ಲ. ಹೆಜ್ಜೆ ಹೆಜ್ಜೆಗೂ ತಗ್ಗು ಗುಂಡಿಗಳ ದರ್ಶನ ಆಗುತ್ತೆ. ತಗ್ಗು ಗುಂಡಿಗಳ ಸಮಸ್ಯೆಯಿಂದ ಅದೆಷ್ಟೋ ವಾಹನ ಸವಾರರು ದ್ವಿಚಕ್ರ ವಾಹನಗಳಿಂದ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿರುವ ಪ್ರಸಂಗಗಳು ಕೂಡ ನಡೆದಿವೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ ಎಂಬ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ರಸ್ತೆ ಗುಂಡಿ ವಿಚಾರವಾಗಿ ರಾಜ್ಯ ಹೈಕೋರ್ಟ್, ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರಸ್ತೆ ಅಪಘಾತಕ್ಕೆ ಸಂಬಂಧಿಸಿ ಅನೇಕರು ನಮ್ಮಲ್ಲಿ ಪರಿಹಾರ ಕೇಳುತ್ತಾರೆ. ಆದರೆ ಆ ಪ್ರಕರಣ ನಿಭಾಯಿಸುವ ವ್ಯವಸ್ಥೆ, ಸಂಪನ್ಮೂಲ ನಮ್ಮಲ್ಲಿಲ್ಲ ಎಂದು ಅರ್ಜಿಯಲ್ಲಿ ಬಿಬಿಎಂಪಿ ತಿಳಿಸಿತ್ತು.

ಈ ವಾದವನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್, ರಸ್ತೆ ನಿರ್ವಹಣೆ ನಿರ್ಲಕ್ಷ್ಯದಿಂದ ಉಂಟಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಪಾಲಿಕೆಯದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ರಸ್ತೆಯಲ್ಲಿ ಗುಂಡಿಗಳು ಇರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೈಕೋರ್ಟ್ ಆದೇಶದಲ್ಲಿ ನ್ಯೂನತೆ ಏನಿದೆ ಎಂಬುದನ್ನು ನೀವು ತೋರಿಸಿ ಎಂದು ನ್ಯಾ. ರೋಹಿಂಟನ್ ನಾರಿಮನ್ ಮತ್ತು ನ್ಯಾ. ರವೀಂದ್ರ ಭಟ್ ಇದ್ದ ನ್ಯಾಯಪೀಠ ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿ ಅರ್ಜಿಯನ್ನು ರದ್ದುಗೊಳಿಸಿತ್ತು.

ಅಪಘಾತಕ್ಕೆ ಬಿಬಿಎಂಪಿ ಪರಿಹಾರ ನೀಡಬೇಕು ಎನ್ನುವುದಾದರೆ ಬೊಕ್ಕಸಕ್ಕೆ ಭಾರೀ ನಷ್ಡವಾಗುತ್ತದೆ. ಇದನ್ನು ಭರಿಸುವುದು ಕಷ್ಟಕರ. ಯಾವ ತಪ್ಪು ಮಾಡದಿದ್ದರೂ ಬಿಬಿಎಂಪಿ ಪರಿಹಾರ ನೀಡಬೇಕು ಎಂಬುದು ಸರಿಯಲ್ಲ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಧಿಕಾರ ಮೀರಿ ನಡೆದುಕೊಂಡಿದೆ ಎಂದು ಬಿಬಿಎಂಪಿ ವಾದಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *