ಕಸಕ್ಕೂ ಬಂತು ಬಾರ್ ಕೋಡ್

Public TV
2 Min Read

ಬೆಂಗಳೂರು: ಕಸದ ಆಟೋ, ಟಿಪ್ಪರ್‌ಗಳ ತಪ್ಪು ಲೆಕ್ಕದ ತಲೆನೋವಿನಿಂದ ಪಾರಾಗಲು ಪಾಲಿಕೆ ಹೊಸ ಐಡಿಯಾ ಮಾಡಿದೆ. ಇನ್ನು ರೀಡ್ ಟ್ಯಾಗ್ ಇನ್ ಮಿನಿಟ್ಸ್ ಬಾರ್ ಕೋಡ್‍ಗಳನ್ನ ಆಟೋಗಳಿಗೆ ಅಳವಡಿಸಲು ಪಾಲಿಕೆಯಿಂದ ಸೂಚಿಸಲಾಗಿದೆ.

ಈ ಪ್ರಕಾರ ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮತ್ತಷ್ಟು ಕಾರ್ಯೋನ್ಮುಖವಾಗಲಿದೆ. ಆಗ ಪ್ರತಿ ರಸ್ತೆಗೂ ಸಹ ಹಾಕಲಾದ ಬಾರ್ ಕೋಡ್‍ಗಳನ್ನು ಆಟೋಗಳು ಸ್ಕ್ಯಾನ್ ಮಾಡುವ ಮೂಲಕ ಕಸ ತೆಗೆಯಲಾಗಿದೆ ಎಂಬ ದೃಢಿಕರಣ ನೀಡಬೇಕಾಗುತ್ತದೆ. ಈ ಮೂಲಕ ಆಟೋ ತಪ್ಪು ಲೆಕ್ಕ ಹಾಗೂ ಮನೆಗಳ ಕಸ ತೆಗೆಯದೇ ಇರುವುದನ್ನ ತಪ್ಪಿಸಬಹುದು ಎಂದು ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

ಕಸದಿಂದ ವಿದ್ಯುತ್ ಉತ್ಪಾದನೆಗೆ ಕಡೆಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಗರದ ಹೊರವಲಯದ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ.

ಚಿಕ್ಕನಾಗಮಂಗಲದ ತ್ರೀ ವೇಸ್ಟ್, ಕೆಪಿಸಿಎಲ್‍ನ ಬಿದಡಿ ಸಂಸ್ಥೆ, ದೊಡ್ಡಬಿದಿರೆಕಲ್ಲಿನ ಇಂಡಿಯಂ, ಕನ್ನಹಳ್ಳಿಯ ಸಾತರಾಂ ಸೇರಿದಂತೆ ನಗರದ 4 ಕಡೆ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು. ಈ ಘಟಕಗಳು ಕೆಲಸ ಆರಂಭಿಸಿದರೆ ಮುಂದಿನ ವರ್ಷ ಕಸದಿಂದ ವಿದ್ಯುತ್ ತಯಾರಿಸಲು ಅನುಕೂಲ ಆಗಲಿದೆ. ಮಿಕ್ಸ್ ತ್ಯಾಜ್ಯವನ್ನ ನೀಡಿದರೆ ಟಾರ್ಗೆಟ್ ವಿದ್ಯುತ್ ಉತ್ಪಾದನೆ ಆಗಲಿದೆ.

ಪಾರ್ಕ್‍ಗಳಲ್ಲಿ ಕಸ ನಿರ್ಹಣೆಗೆ ಚಿಂತನೆ:
ಬೆಂಗಳೂರಿನ 198 ವಾರ್ಡ್‌ಗಳಲ್ಲೂ ಸಾವಿರಕ್ಕೂ ಹೆಚ್ಚು ಪಾರ್ಕ್‍ಗಳಿದ್ದು, ಹಸಿ ಕಸವನ್ನ ಕಾಂಪೋಸ್ಟ್ ಮಾಡಲು ಆಲೋಚಿಸಲಾಗಿದೆ. ಈಗಾಗಲೇ ಹೆಚ್.ಎಸ್.ಆರ್ ಲೇಔಟ್‍ನಲ್ಲಿ ಯಶಸ್ವಿಯಾಗಿ ಈ ಯೋಜನೆ ನಡೆಯುತ್ತಿದೆ. ಕಸ ನಿರ್ವಹಣೆಗೆ ಪ್ರತ್ಯೇಕ ಕಾರ್ಪೋರೆಷನ್ ಮಾಡಿ, ಬೆಂಗಳೂರಿನ ಕಸ ನಿರ್ವಹಣೆಗಾಗಿ ಪತ್ಯೇಕ ಕಾರ್ಪೋರೆಟರ್ ಮಾಡಲು ಸರ್ಕಾರ ಸೂಚಿಸಿದೆ. ಈ ಸಂಬಂಧ ಬಿಬಿಎಂಪಿ ಸಿದ್ಧತೆ ಕೈಗೊಂಡಿದೆ. ಇದು ಪಾಲಿಕೆಯ ಅಂಗವಾಗಿಯೇ ಉಳಿಯಲಿದ್ದು, ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದರು.

ಸರ್ಕಾರದಿಂದ ಕ್ವಾರಿಗಳಿಗೆ ಅನುಮತಿ:
ಇನ್ನು ಮುಂದಿನ 10 ದಿನಗಳಲ್ಲಿ ಬೆಳ್ಳಳಿ ಕ್ವಾರಿಗೆ ಹೋಗುತ್ತಿರುವ ಕಸ ಹಂತ ಹಂತವಾಗಿ ನಿಲ್ಲಿಸಲಾಗುತ್ತದೆ. ಈಗಾಗಲೇ ಬೆಳ್ಳಳಿ ಕ್ವಾರಿ ಭರ್ತಿಯಾಗಿದೆ. ಹೀಗಾಗಿ ಬೆಂಗಳೂರಿನ ಕಸ ಸುರಿಯಲು 15 ಕೋಟಿ ವೆಚ್ಚದಲ್ಲಿ ಮಿಟ್ಟಗಾನಹಳ್ಳಿ ಸಮೀಪ ಕ್ವಾರಿ ಸಿದ್ಧವಾಗಿದ್ದು, ಮುಂದಿನ 4 ತಿಂಗಳು ನಗರದ ಕಸ ಹಾಕಲು ಇಲ್ಲಿ ಅವಕಾಶವಿದೆ. ಸರ್ಕಾರಕ್ಕೆ ಸದ್ಯ ಬಾಗಲೂರು ಹಾಗೂ ಹುಲ್ಲಹಳ್ಳಿಯಲ್ಲೂ ಕ್ವಾರಿ ಪೀಟ್ ತಯಾರು ಮಾಡಲು ಪ್ರಸ್ತಾವನೆ ನೀಡಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *