ಸಿದ್ದರಾಮಯ್ಯ 2 ವರ್ಷ 11 ತಿಂಗಳು ಸಿಎಂ ಆಗಿರ್ತಾರೆ, ಇನ್ನೂ ಸ್ಟ್ರಾಂಗ್ ಆಗ್ತಾರೆ: ಬಸವರಾಜ ರಾಯರೆಡ್ಡಿ ಬಾಂಬ್

Public TV
2 Min Read

– ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಬೇಕು, ಸಂದರ್ಭ ಬಂದಾಗ ನೋಡೋಣ

ಬೆಂಗಳೂರು: ಸಿಎಂ ಆಪ್ತರಿಂದ ಶಾಂತಿ-ಕ್ರಾಂತಿ ಹೇಳಿಕೆ ರೋಚಕ ರಾಜಕೀಯಕ್ಕೆ ವೇದಿಕೆ ಆಗಿದ್ದು, ಕನ್ಫ್ಯೂಸ್ ಮಾಡುವ ಆಟಕ್ಕಿಳಿದಿದ್ದಾರೆ. ʻಸೆಪ್ಟೆಂಬರ್ ಕ್ರಾಂತಿʼ ಆಗುತ್ತೆ ಅಂತ ಕೆ.ಎನ್‌ ರಾಜಣ್ಣ (KN Rajanna) ಹೇಳಿದ್ರೆ ಯಾವ ಕ್ರಾಂತಿಯೂ ಇಲ್ಲ ಎಂದು ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿದ್ದಾರೆ. ಆದ್ರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಶಾಸಕರ ಆಯ್ಕೆಯೇ ಅಂತಿಮ ಎಂಬ ಸಂದೇಶವನ್ನ ಸಿಎಂ ಆಪ್ತರು ರವಾನಿಸಿದ್ದಾರೆ.

ನಿನ್ನೆ ಸಚಿವ ಕೆ.ಎನ್‌ ರಾಜಣ್ಣ ಬಾಂಬ್ ಬಳಿಕ ಇವತ್ತು ಮುಖ್ಯಮಂತ್ರಿ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸರದಿ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಕ್ರಾಂತಿ ಏನಿಲ್ಲ.‌ ಸಿಎಂ ಬದಲಾವಣೆಯಂತೂ ಆಗುವುದೇ ಇಲ್ಲ ಅಂತಾ ಚೆಕ್ ಮೇಟ್ ಇಟ್ಟಿದ್ದಾರೆ. ಸಿಎಂ (Chief Minister) ಅವರನ್ನ ಬದಲಾವಣೆ ಯಾರು ಮಾಡಬೇಕು.. ನಾವೇ ಅಲ್ವಾ? ನಾನೂ ಕೂಡ ಒಬ್ಬ ವೋಟರ್, ಸಿಎಂಗೆ ಈಗಲೂ ಬಹುಮತ ಇದೆ. ಸಿದ್ದರಾಮಯ್ಯಗೆ (Siddaramaiah) ಇರುವಷ್ಟು ಜನ ಬೆಂಬಲ ಯಾರಿಗೂ ಇಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್

ಪವರ್‌ ಸೆಂಟರ್‌ ಜಾಸ್ತಿ ಆಗಿರೋದು ನಿಜ
ಸಿದ್ದರಾಮಯ್ಯ ನಾಟ್ ಎ ವೀಕ್ ಚೀಫ್ ಮಿನಿಸ್ಟರ್. ಪವರ್ ಸೆಂಟರ್ ಜಾಸ್ತಿ ಆಗಿವೆ ನಿಜ, ಸಿದ್ದರಾಮಯ್ಯಗೂ ವಯಸ್ಸಾಯ್ತಲ್ಲ. ಕೆಲವೊಮ್ಮೆ ಇನ್ನೊಂದು ಪವರ್ ಸೆಂಟರ್‌ಗಳ ಮಾತು ಕೇಳಬೇಕಾಗುತ್ತದೆ. ಆದರೆ 2 ವರ್ಷ 11 ತಿಂಗಳು ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಅಂದ್ರು. ನಾವೆಲ್ಲ ಸಿಎಂನ ಇನ್ನಷ್ಟು ಸ್ಟ್ರಾಂಗ್ ಮಾಡ್ತೇವೆ, ಹಳೆಯ ಸ್ಟೈಲ್‌ನಲ್ಲಿ ಆಡಳಿತ ಮಾಡಿ ಅಂತ ನಾವೂ ಹೇಳ್ತಿದ್ದೇವೆ. ನಾವೆಲ್ಲ ಏನು ಸುಮ್ಮನೆ ಇರ್ತೀವಾ? ಎಂದು ಟಕ್ಕರ್ ಕೊಟ್ಟರು. ಮುಖ್ಯಮಂತ್ರಿ ಬದಲಾವಣೆ ಊಹಾಪೋಹ. ಕೆಲವರು ಮೆಂಟಲ್ ಹ್ಯಾಪಿನೆಸ್‌ಗೆ ಹೀಗೆಲ್ಲ ಮಾತಾಡ್ತಾರೆ ಅಂದಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಹೈಕಮಾಂಡ್ ಗಮನದಲ್ಲಿದೆ. ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಆದರೆ ಹೈಕಮಾಂಡ್ ನಾಯಕರು ಏನ ತೀರ್ಮಾನ ಮಾಡ್ತಾರೋ ಗೊತ್ತಿಲ್ಲ ಅಂದ್ರು. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

ಮಲ್ಲಿಕಾರ್ಜುನ್ ಖರ್ಗೆ ಇದೇ ಪಕ್ಷದಲ್ಲಿ ಇದ್ದಾರೆ. ಆದರೆ ಅವರು ಚೀಫ್ ಮಿನಿಸ್ಟರ್ ಆಗೋಕೆ ಆಗಿಲ್ಲ. ರಾಮಕೃಷ್ಣ ಹೆಗಡೆ ಪ್ರಧಾನಮಂತ್ರಿ ಆಗೋಕೆ ಆಗಿಲ್ಲ. ಸಂದರ್ಭಕೆಲವು ದಲ್ಲಿ ಆಗಲಿಕ್ಕೆ ಆಗೋದಿಲ್ಲ. ಆದರೆ ಅದರ ಅರ್ಥ ಅವರು ಕಡಿಮೆ ಆಗಿದ್ದಾರೆ ಅಂತಾ ಅಲ್ಲ. ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಆಗಬೇಕು, ಸಂದರ್ಭ, ನೋಡೋಣ ಎಂದು ರಾಯರೆಡ್ಡಿ ಹೇಳಿದ್ರು. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

Share This Article