ನಿರಾಣಿ ಆ ಹುಲಿ ಜೊತೆ ಮಾತಾಡಲಿ- ಯತ್ನಾಳ್‍ರನ್ನ ಹುಲಿಗೆ ಹೋಲಿಕೆ ಮಾಡಿದ ಸ್ವಾಮೀಜಿ

Public TV
2 Min Read

ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ (Murugesh Nirani) ಆ ಹುಲಿ ಜೊತೆ ಮಾತಾಡಲಿ. ಒಬ್ಬ ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಹೋರಾಟ ಮಾಡಿದ್ದಾರೆ. ಯತ್ನಾಳ್ ರ ಹೋರಾಟ ನಿಸ್ವಾರ್ಥ ಹೋರಾಟ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಹೇಳಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ (2 A Reservation For Panchamasali) ಗೆ ಆಗ್ರಹಿಸಿ ಇಂದು ಫ್ರೀಡಂ ಪಾರ್ಕ್‍ನಲ್ಲಿ ಮತ್ತೆ ಹೋರಾಟ ನಡೆಸುತ್ತಿದ್ದು, ಈ ವೇಳೆ ಯತ್ನಾಳ್ ನಿಂದನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಯಾವ ಅಧಿಕಾರ, ಸಚಿವ ಸ್ಥಾನದ ಆಕ್ಷೇಪ ಇರಿಸಿಕೊಳ್ಳದೇ ಹೋರಾಟ ಮಾಡಿದ್ದಾರೆ. ಅವರ ಹೆಸರು ಸಿಎಂ ಸ್ಥಾನದಲ್ಲಿ ಇದ್ರೂ ಹೋರಾಟ ಮಾಡಿದ್ದಾರೆ. ಜನರ ಹೃದಯದಲ್ಲಿ ಬಸವನಗೌಡ ಪಾಟೀಲ್ ನೆಲೆಸಿದ್ದಾರೆ ಎಂದರು.

ಉಂಡ ಮನೆಗೆ ದ್ರೋಹ ಬಗೆಯದೇ ಇರುವ ಮನಸ್ಸು ಅವರದ್ದು. ವೈಯಕ್ತಿಕ ನಿಂದನೆ ಸರಿಯಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಸ್ವಾಮೀಜಿ ತಿಳಿಸಿದರು.  ಇದನ್ನೂ ಓದಿ: ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ – ಯತ್ನಾಳ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ: ಸಿಎಂ ವಾರ್ನಿಂಗ್

ನಿರಾಣಿ ಹೇಳಿದ್ದೇನು..?: ರಾಜ್ಯದಲ್ಲಿ ಮೀಸಲಾತಿ ಕದನ ತಾರಕಕ್ಕೇರಿದೆ. ಅದರಲ್ಲೂ ಬಿಜೆಪಿಯಲ್ಲಿ ಯತ್ನಾಳ್ ಹಾಗೂ ನಿರಾಣಿ ಪರಸ್ಪರ ವಾಗ್ವಾದ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಪಿಂಪ್ ಅಂತ ಆರೋಪ ಮಾಡಿದ್ದ ಯತ್ನಾಳ್‍ಗೆ ನಿರಾಣಿ ಏಕವಚನದಲ್ಲಿ ನಿಂದಿಸಿದ್ದಾರೆ. ಇದಕ್ಕೆ ನಿರಾಣಿ ಪ್ರತಿಕ್ರಿಯಿಸಿದ್ದು, ತಾಕತ್ತ್ ಇದ್ರೆ ಕೊರ್ಟ್‍ನಲ್ಲಿರೋ ಸ್ಟೇ ತೆರವು ಮಾಡಲು ಸವಾಲು ಹಾಕಿದ್ದಾರೆ. ಪಕ್ಷದ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ? ರಾಜೀನಾಮೆ ಕೊಟ್ಟು ಹೋಗು ಎಂದು ಕಿಡಿಕಾರಿದರು.

ಬಿಜೆಪಿ ಪಕ್ಷ ನಮಗೆ ಸಂಸ್ಕೃತಿ ಕಲಿಸಿದೆ. ಅವರಪ್ಪಗೆ ಅವರು ಹುಟ್ಟಿದ್ರೆ ಈ ಮಾತು ಆಡ್ತಿರ್ಲಿಲ್ಲ. ಸುಸಂಸ್ಕೃತ ಆಗಿದ್ದಿದ್ರೆ ಅವರು ಹೀಗೆ ಮಾತಾಡ್ತಿರ್ಲಿಲ್ಲ. ಅವರು ಸುಸಂಸ್ಕೃತರಾಗಿ ಮಾತಾಡ್ತಿಲ್ಲ ಅಂದ್ರೆ ಅವರು ಪಿಂಪ್‍ಗೆ ಹುಟ್ಟಿರಬೇಕು ಅಥವಾ ಬೇರೆ ಯಾರಿಗೋ ಹುಟ್ಟಿರಬೇಕು. ನಿಮ್ಮಪ್ಪನಿಗೆ ನೀವು ಹುಟ್ಟಿದ್ರೆ ನೀವು ಕೋರ್ಟ್‍ನಲ್ಲಿ ತಂದಿರುವ ಸ್ಟೇ ತೆರವು ಮಾಡಿ. ನಿಮ್ಮ ಜತೆ ಕುಮಾರ್ ಅಂತ ಒಬ್ಬ ಡ್ರೈವರ್ ಇದ್ದ, ಆತನ ಕೊಲೆ ಆಗಿದೆ. ಆತನ ಕೊಲೆ ಯಾಕಾಯ್ತು, ಯಾರು ಮಾಡಿದ್ದು ಅಂತ ಹೇಳಿ ಎಂದು ಸವಾಲು ಹಾಕಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *