ಬಸವ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ: 3 ಗಂಟೆ ನಿಂತಲ್ಲೇ ನಿಂತ ರೈಲು

Public TV
0 Min Read

ಮಂಡ್ಯ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸವ ಎಕ್ಸ್‌ಪ್ರೆಸ್‌ ರೈಲು 3 ಗಂಟೆಗಳ ಕಾಲ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ನಿಂತಲ್ಲೇ ನಿಂತಿತ್ತು.

ಮಧ್ಯಾಹ್ನ 12 ಗಂಟೆ ವೇಳೆಗೆ ಕೆಟ್ಟ ನಿಂತ ರೈಲು ಮಧ್ಯಾಹ್ನ 3:30ರ ವೇಳೆಗೆ ರಿಪೇರಿಯಾಗಿ ಹೊರಟಿತ್ತು. ಬೆಂಗಳೂರಿನಿಂದ ಮೈಸೂರಿಗೆ ರೈಲು ತೆರಳುತ್ತಿರುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಸ್ ಸಂಪರ್ಕವೂ ಸರಿಯಾಗಿಲ್ಲದ ಮಾರ್ಗದಲ್ಲಿ ರೈಲು ಕೆಟ್ಟು ನಿಂತಿತ್ತು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪ್ರಯಾಣಿಕರು ರೈಲಿನಲ್ಲೇ ಕುಳಿತು ಕುಳಿತುಕೊಳ್ಳಬೇಕಾಯಿತು.

ಊಟದ ಸಮಯದ ವೇಳೆಯೇ ರೈಲು ಕೆಟ್ಟು ನಿಂತಿ ಪರಿಣಾಮ, ಚಿಕ್ಕ ಮಕ್ಕಳು, ವೃದ್ಧರು ಹಾಗೂ ಮಹಿಳೆಯಲು ಹಸಿವಿನಿಂದ ಪರದಾಡಿದರು.

Share This Article
Leave a Comment

Leave a Reply

Your email address will not be published. Required fields are marked *