ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ

Public TV
2 Min Read

ಮಂಡ್ಯ: ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನುವವರ ಬಾಯಿಗೆ ಗುಂಡು ಹೊಡೆದು ಎನ್‌ಕೌಂಟರ್ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದರು.

ಮದ್ದೂರಿನಲ್ಲಿ (Maddur) ಭಾಷಣ ಮಾಡಿದ ಯತ್ನಾಳ್, ನಮ್ಮ ಮಣ್ಣಿನಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನೋದು ಇಲ್ಲಿ ಇರಲು ಅರ್ಹತೆ ಇಲ್ಲ. ಜನರು ಇನ್ಮುಂದೆ ಜಾತಿ ನೋಡಿ ಓಟು ಹಾಕಬೇಡಿ. ಸಿದ್ದರಾಮಯ್ಯ ಸರ್ಕಾರ ಔರಂಗಜೇಬನ ಸರ್ಕಾರವಾಗಿದೆ. ಸಾಬರಿಗೆ ಮೀಸಲಾತಿ, ಗುತ್ತಿಗೆ ಮೀಸಲಾತಿ ವಕ್ಫ್ ದೇಣಿಗೆ ಕೊಡುತ್ತಿರುವ ಮುಸ್ಲಿಂ ಸರ್ಕಾರ ಬೇಕಾ? ವಿಧಾನಸಭೆಯಲ್ಲಿ ಮಾತನಾಡುವುದೇ ಬೇರೆ ಆಮೇಲೆ ಸಿದ್ದರಾಮಯ್ಯ, ಡಿಕೆಶಿ ಮನೆಗೆ ಹೋಗುವುದೇ ಬೇರೆಯಾಗಿದೆ. ಹೊಂದಾಣಿಕೆ ರಾಜಕಾರಣ ಮಾಡಿ ಎಲ್ಲರಿಗೂ ಮೋಸ ಮಾಡ್ತಿದ್ದಾರೆ. ಮುಸ್ಲಿಂ ಸರ್ಕಾರ ನಡೆಸಿದ್ರೆ 3 ತಿಂಗಳಲ್ಲಿ ಕಿತ್ತೊಗೆದು ಹಿಂದೂ ಸರ್ಕಾರ ಬರುತ್ತದೆ ಎಂದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಲಾಠಿ ಏಟು ತಿಂದಿದ್ದ ಮಹಿಳೆ ವಿರುದ್ಧ ಎಫ್‌ಐಆರ್‌

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಲು ಬಿಡಲ್ಲ ಅಂತಾರೆ. ಇವರು ಕಟ್ಟಿದ ಮಸೀದಿ ಅಕ್ರಮ ಅಲ್ಲವಾ? ಇನ್ಮುಂದೆ ಕರ್ನಾಟಕದಲ್ಲಿ ಇದು ನಡೆಯಲ್ಲ. ನೀವು ನನಗೆ ಆಶೀರ್ವಾದ ಮಾಡಿದ್ರೆ ರಾಜ್ಯಾದ್ಯಂತ ಅಕ್ರಮ ಮಸೀದಿಗಳನ್ನ ನಿಲ್ಲಿಸುತ್ತೇನೆ. ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬ ಬೇಕೋ? ಬೇಡವೋ? ಆ ನನ್ಮಕ್ಕಳು ಕಲ್ಲು ಹೊಡೆದರು. ಆದರೆ, ನಮ್ಮ 500 ಹಿಂದೂಗಳ ಮೇಲೆ FIR ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಪೊಲೀಸರ ವಿರೋಧಿಗಳಲ್ಲ. ಪೊಲೀಸರೇ ನಿಮಗೂ ನಿಮ್ಮ ಹಿಂದೂ ಧರ್ಮ ಶ್ರೇಷ್ಠ. ನಮ್ಮವರು ತಪ್ಪು ಮಾಡಿಲ್ಲ. ನಮ್ಮ ಸರ್ಕಾರ ಬಂದರೆ ಅನಧಿಕೃತ ಮಸೀದಿ ನಿಲ್ಲಿಸುತ್ತೇನೆ. ನಮ್ಮ‌ ದೇಶದಲ್ಲಿ ಇರಬೇಕಾದರೆ ನಮ್ಮೊಂದಿಗೆ ಚೆನ್ನಾಗಿರಿ‌. ಆ ಗಾಂಧಿ ನಿಮಗೆ ಪಾಕಿಸ್ತಾನ್ ಮಾಡಿಕೊಟ್ಟನಲ್ಲ ಅಲ್ಲಿಗೆ ಹೋಗಿ. ಈದ್ ಮಿಲಾದ್ ನಡೆದಾಗ ಯಾರೂ ಕಲ್ಲು ಹೊಡೆದಿಲ್ಲ. ಭ್ರಷ್ಟ ಸರ್ಕಾರ ಬೇಕಾಗಿಲ್ಲ. ಇವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಬಿಟ್ಟು ಯಾರನ್ನ ಉದ್ಧಾರ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

ಮುಸ್ಲಿಂ ಆಗಿ ಹುಟ್ಟುತ್ತೀನಿ ಅಂತಾರೆ. ಈಗಲೇ ಆಗಿಬಿಡ್ರೋ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ತೀನಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ಹಾಲುಮತದಲ್ಲಿ ಹುಟ್ಟಿ ಈ ಮಾತ ಹೇಳ್ತಾರೆ. ಕುಂಕುಮ, ಪೇಟಾ ಬೇಡ ಎಂದವರು ಸಾಬ್ರ ಟೋಪಿ ಹಾಕಿಕೊಳ್ತಾರೆ. ಸಿದ್ದರಾಮಯ್ಯ ಯಾಕೆ ಹಿಂದೂಗಳ ಕುಂಕುಮ, ಪೇಟಾ ಮೇಲೆ ದ್ವೇಷ? ಡಿಜೆ ಬೇಡ ಅಂತಾರೆ. ದಿನಕ್ಕೆ ಐದು ಬಾರಿ ಮೈಕ್ ಹಾಕ್ತಾರೆ‌. ಸಿದ್ದರಾಮಯ್ಯ, ಡಿಕೆಶಿ, ಗೃಹಮಂತ್ರಿ ತಾಕತ್ ಇದ್ರೆ ಮಸೀದಿ ಮೈಕ್ ನಿಲ್ಲಿಸಿ‌‌. ಮುಸ್ಲಿಂ ಏಜೆಂಟ್‌ಗಳಾಗಿ ಕೆಲಸ ಮಾಡಬೇಡಿ. ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಯಾರಿಗೂ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯಿಂದಲೇ ನನ್ನ ಯುದ್ಧ ಪ್ರಾರಂಭವಾಗಿದೆ. ಹಿಂದೂ ಕಾರ್ಯಕರ್ತರಿಗೆ ಕಲ್ಲು ಹೊಡೆದವರಿಗೆ ಸರಿಯಾದ ಶಿಕ್ಷೆ ಆಗಬೇಕು. ಸನಾತನ ಹಿಂದೂ ಧರ್ಮ ಜಾಗೃತವಾಗಿದೆ. ನೇಪಾಳದ‌ ಪರಿಸ್ಥಿತಿ ಬರುವ ಮೊದಲೇ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.

Share This Article