ನಾಗಮಂಗಲದಲ್ಲಿ ನಿಷೇಧಿತ ಪಿಎಫ್‌ಐ ಸಕ್ರಿಯ, ಆಸ್ತಿ ಮುಟ್ಟುಗೋಲು ಹಾಕಬೇಕು – ಬಿಜೆಪಿ ಸತ್ಯಶೋಧನಾ ವರದಿಯಲ್ಲಿ ಏನಿದೆ?

Public TV
2 Min Read

ಬೆಂಗಳೂರು: ನಾಗಮಂಗಲ ಗಲಭೆ (Nagamangala Violence) ಕೇಸ್‌ನಲ್ಲಿ ಬಿಜೆಪಿ (BJP) ರಚಿಸಿದ್ದ ಸತ್ಯಶೋಧನಾ ಸಮಿತಿ ಇಂದು (ಶುಕ್ರವಾರ) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಅವರಿಗೆ ವರದಿ ಸಲ್ಲಿಕೆ ಮಾಡಿದೆ. ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ ಮಾಡಿತು.

ಘಟನೆಗೆ ಪೊಲೀಸರ ವೈಫಲ್ಯ ಕಾರಣ ಮತ್ತು ತುಷ್ಟೀಕರಣ ರಾಜಕೀಯದಿಂದ ಘಟನೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖ ಆಗಿದೆ. ಅಲ್ಲದೆ ನಾಗಮಂಗಲ ಗಲಭೆ ಸಂಬಂಧ ಎನ್‌ಐಎ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಅಭದ್ರತೆ ಕಾಡ್ತಿರೋದ್ರೀಂದ ವಿಪಕ್ಷ ನಾಯಕರ ಮೇಲೆ ಕೇಸ್ ದಾಖಲು – ವಿಜಯೇಂದ್ರ ಕಿಡಿ

ಸತ್ಯಶೋಧನಾ ಸಮಿತಿ ವರದಿಯಲ್ಲಿ ಏನಿದೆ?
* ಘಟನೆಯಲ್ಲಿ ಪೋಲೀಸರ ಸಂಪೂರ್ಣ ವೈಫಲ್ಯ ಇದೆ. ಪೊಲೀಸರ ಕೈಗಳನ್ನು ಸರ್ಕಾರ ಕಟ್ಟಿ ಹಾಕಿದೆ.
* ಅಮಾಯಕರನ್ನು ಬಂಧನ ಮಾಡಿ ಕೃತ್ಯ ಮಾಡಿರುವವರನ್ನು ಹೊರಗೆ ಬಿಡಲಾಗಿದೆ.
* ನಿಷೇಧಿತ ಪಿಎಫ್‌ಐ ಸಂಘಟನೆ ನಾಗಮಂಗಲದಲ್ಲಿ ಆಕ್ಟಿವ್ ಆಗಿದೆ. ಇದನ್ನೂ ಓದಿ: ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

* ನಾಗಮಂಗಲ ಕೇಸ್‌ನಲ್ಲಿ ಒಂದು ಸಮುದಾಯದ ತುಷ್ಟೀಕರಣ ಕೆಲಸಗಳು ಆಗಿವೆ.
* ನಾಗಮಂಗಲ ಕೇಸ್ ನಲ್ಲಿ ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ.
* ಈ ಸರ್ಕಾರದಲ್ಲಿ ಹಿಂದೂ ವಿರೋಧಿಗಳು, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ಸಹಕಾರ ಕೊಡಲಾಗುತ್ತಿದೆ.
* ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟವಾಗಿರುವವರಿಗೆ 100% ಪರಿಹಾರ ಸರ್ಕಾರ ಕೊಡಬೇಕು. ಇದನ್ನೂ ಓದಿ: 80% ಹಿಂದೂಗಳಿದ್ರೂ ನೆಮ್ಮದಿಯಾಗಿ ಗಣೇಶೋತ್ಸವ ಆಚರಿಸೋಕಾಗ್ತಿಲ್ಲ: ಸಿ.ಟಿ ರವಿ ಆತಂಕ

* ಘಟನೆಯಲ್ಲಿ ಭಾಗಿಯಾಗಿರುವ ದುಷ್ಟರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.
* ನಾಗಮಂಗಲ ಗಲಭೆ ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು. ಇದನ್ನೂ ಓದಿ: ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯ ಕಾರಣ: NIA ತನಿಖೆಗೆ ಆಗ್ರಹಿಸಿದ ಅಶ್ವಥ್ ನಾರಾಯಣ

Share This Article