ದೋಸ್ತಿಗೆ ರಾಜ್ಯಪಾಲರಿಂದ ವಾರ್ನಿಂಗ್

Public TV
1 Min Read

ಬೆಂಗಳೂರು: ದೋಸ್ತಿ ಸರ್ಕಾರ ಅಳಿವಿನ ಅಂಚಿನಲ್ಲಿದ್ದರೂ ಎಗ್ಗಿಲ್ಲದೇ ಕಡತ ವಿಲೇವಾರಿ ನಡೆಯುತ್ತಿದೆ. ಅಲ್ಲದೆ ಯದ್ವಾತದ್ವಾ ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಲಾಗುತ್ತಿದೆ.

ಈ ಸಂಬಂಧ ರಾಜ್ಯಪಾಲರು ಈಗ ಎಂಟ್ರಿ ಕೊಟ್ಟಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ. ಯಾವುದೇ ಫೈಲ್ ಕ್ಲಿಯರ್ ಮಾಡಬೇಡಿ. ಅಲ್ಲದೆ ವರ್ಗಾವಣೆ ಆದೇಶ ನೀಡಬಾರದು ಎಂದು ರಾಜ್ಯಪಾಲ ವಜೂಭಾಯ್ ವಾಲಾ ಅವರು ದೋಸ್ತಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್‍ ಗೆ ರಾಜ್ಯಪಾಲರು ಈ ಪತ್ರ ರವಾನಿಸಿದ್ದಾರೆ. ಒಟ್ಟಿನಲ್ಲಿ ವಿಶ್ವಾಸ ಮತಯಾಚನೆಗೆ 2 ಬಾರಿ ಗಡುವು ಕೊಟ್ಟರೂ ಕ್ಯಾರೇ ಎನ್ನದ ದೋಸ್ತಿಗಳು ಇದೀಗ ಈ ವಿಚಾರದಲ್ಲಿ ಮೈತ್ರಿ ನಾಯಕರು ರಾಜ್ಯಪಾಲರಿಗೆ ಗೌರವ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *