ನರೇಗಾ ಗೋಲ್ಮಾಲ್- ಮಿನಿಸ್ಟರ್ ಬಂದಾಗ ಕೆಲಸ ಕೊಟ್ರು, ಹೋದ್ಮೇಲೆ ಜೆಸಿಬಿ ತರಿಸಿದ್ರು

Public TV
1 Min Read

ಬಾಗಲಕೋಟೆ: ಸಚಿವರು ಬಂದಾಗ ಕೆಲಸ ಕೊಡ್ಸಿ, ಸಚಿವರು ಹೋದ ಬಳಿಕ ಮನೆಗೆ ಕಳುಹಿಸಿದ ಘಟನೆ ಬಾಗಲಕೋಟೆಯ ಬೀಳಗಿಯ ಗಿರಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು. ಸಚಿವರು ಬಂದಾಗ ಜನರನ್ನು ಗುಡ್ಡೆ ಹಾಕಿ ಕೆಲಸ ಕೊಟ್ರು. ಸಚಿವರು ಹೋದ ಬಳಿಕ ಕೆಲಸ ಇಲ್ಲ ಹೋಗಿ ಅಂದ್ರು. ರಾತ್ರೋ ರಾತ್ರಿ ನರೇಗಾ ಕೆಲಸವನ್ನ ಜೆಸಿಬಿಯಲ್ಲಿ ಕಾಮಗಾರಿ ಮಾಡಿಸಿದ್ರು.

ಇದ್ರಿಂದ ರೊಚ್ಚಿಗೆದ್ದ ಕಾರ್ಮಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬರ ನಿರ್ವಹಣೆ ವೀಕ್ಷಣೆಗೆ ಸಂಪುಟ ಉಪ ಸಮಿತಿಯ ಸಚಿವ ದೇಶಪಾಂಡೆ ಅವ್ರು ಮೇ 12 ರಂದು ಭೇಟಿ ನೀಡಿದ್ರು. ಈ ವೇಳೆ 280 ಕಾರ್ಮಿಕರು ಕೆಲಸ ಮಾಡುತ್ತಿದ್ದು ಕಂಡು ಭೇಷ್ ಅಂದಿದ್ರು. ಆದ್ರೆ, ಅವ್ರು ಹೋದ ಮೇಲೆ ಈಗ ಕೆಲಸ ಇಲ್ಲ ಅಂತ ಹೇಳಿ ಜನರನ್ನ ವಾಪಸ್ ಕಳಿಸಲಾಗಿದೆ.

ಎನ್‍ಆರ್‍ಇಜಿ ಅಡಿ ಕೆಲಸ ಬಂದ್ ಮಾಡಿ ಜೆಸಿಬಿ ಮೂಲಕ ರಾತ್ರೋ ರಾತ್ರಿ ಕಾಮಗಾರಿ ಮಾಡಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *