ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್

Public TV
1 Min Read

ಬೆಂಗಳೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಿಂದ ಒಂದೊಂದು ರೂಪ ಪಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳು ಒಂದು ಹೇಳಿದರೆ ಗೃಹ ಮಂತ್ರಿ ಬೇರೆ ಹೇಳಿಕೆ ಕೊಡುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ ಜಮೀರ್ ಅಹ್ಮದ್ ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ.

ಚಂದ್ರು ನಿವಾಸಕ್ಕೆ ತೆರಳಿದ ಜಮೀರ್ ಅಹ್ಮದ್ ಅವರ ಅಜ್ಜಿಗೆ ಸಮಾಧಾನ ಮಾಡಿದ್ದಾರೆ. ಈ ವೇಳೆ ಅವರಿಗೆ 2 ಲಕ್ಷ ರೂ. ಪರಿಹಾರ ನೀಡಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು, ಚಿಕನ್ ರೋಲ್ ತಿನ್ನಬೇಕು ಎಂದು ಹೊರಗಡೆ ಹೋದಾಗ ಗಲಾಟೆಯಾಗಿದೆ. ಚಾಕುವಿನಲ್ಲಿ ಚುಚ್ಚಿದ್ದಾರೆ. ಫುಟ್‍ಪಾತ್‍ನಲ್ಲಿ ಜೀವನ ಮಾಡ್ಕೊಂಡು ಪಾಪ ಅವರ ಅಜ್ಜಿ ಅವನನ್ನು ಸಾಕಿದ್ದಾರೆ. ನಾನು 2 ಲಕ್ಷ ಪರಿಹಾರ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಆರಗ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಅವರು, ಹೋಂ ಮಿನಿಸ್ಟರ್ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಗಾಡಿ ಆಕ್ಸಿಡೆಂಟ್ ನಡೆದ ಮೇಲೆ ವಾಗ್ವಾದ ನಡೆದಿದೆ ಎಂದು ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *