ದೇವರ, ರೈತರ ಹೆಸರಿನಲ್ಲಿ ಬಿಎಸ್ ಯಡಿಯೂರಪ್ಪರಿಂದ ಅಧಿಕಾರ ಸ್ವೀಕಾರ

Public TV
1 Min Read

ಬೆಂಗಳೂರು: ಇಂದು ರಾಜ್ಯದ 24ನೇ ಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 3ನೇ ಬಾರಿ ಕರ್ನಾಟಕ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದಾರೆ.

ಯಡಿಯೂರಪ್ಪನವರು ರಾಜಭವನದಲ್ಲಿ ಹಸಿರು ಶಾಲು ಹೊದ್ದು ದೇವರ ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಬಿಎಸ್ ಯಡಿಯೂರಪ್ಪ ಜೊತೆ ನಾಲ್ಕು ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಅವರು ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಬಿಎಸ್‍ವೈ ಪ್ರಮಾಣವಚನ ಸ್ವೀಕರಿಸೋ ಮೊದಲು ತಮ್ಮ ನಿವಾಸದಲ್ಲಿ ವಿಶೇಷ ಪೂಜೆಗಳು ನಡೆಸಿದ್ದರು. ಬುಧವಾರ ಕೂಡ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕಚೇರಿಯಲ್ಲೂ ಕೂಡ ಪೂಜೆ-ಹೋಮ ನೆರವೇರಿತ್ತು. ಈ ವೇಳೆ ಯಡಿಯೂರಪ್ಪ ಮಗ ವಿಜಯೇಂದ್ರ ಅಪ್ಪನಿಗಾಗಿ ಹೊಸ ಡ್ರೆಸ್ ನೀಡಿದ್ದಾರೆ. ಮಲ್ಲೇಶ್ವರಂನ ವಿಜಯೇಂದ್ರ ತಮ್ಮ ಮನೆಯಿಂದ ಬಿಳಿ ಬಣ್ಣದ ಸೂಟ್ ತಂದು ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *