ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ರೂ. ಬಿಟ್ಟ ವಿದೇಶಿ ಪ್ರಜೆ

Public TV
1 Min Read

– ಪೊಲೀಸ್ ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದ ಚಾಲಕ

ಬೆಂಗಳೂರು: ಹೃದಯ ಚಿಕಿತ್ಸೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದ ವಿದೇಶಿ ಪ್ರಜೆಯೊಬ್ಬರು 10 ಲಕ್ಷ ಹಣವನ್ನು ಆಟೊದಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.

ಮಾಲ್ಡೀವ್ಸ್ ನಲ್ಲಿ ನೆಲೆಸಿರುವ ಭಾಸ್ಕರ್ ಹೃದಯ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದಿದ್ದಾರೆ. ಗುರುವಾರ ಚೆಕಪ್ ಮುಗಿಸಿಕೊಂಡು ಭಾಸ್ಕರ್ ಶೇಷಾದ್ರಿಪುರಂನ ಲಾಡ್ಜ್ ಗೆ ಆಟೋದಲ್ಲಿ ಬಂದಿಳಿದಿದ್ದಾರೆ.

ಈ ವೇಳೆ ಭಾಸ್ಕರ್ ಆಟೋದಲ್ಲೇ 1.5 ಲಕ್ಷ ಇಂಡಿಯನ್ ಕರೆನ್ಸಿ ಮತ್ತು 12000 ಯುಎಸ್ ಡಾಲರ್(8.47 ಲಕ್ಷ) ಆಟೋದಲ್ಲಿ ಮರೆತು ಲಾಡ್ಜ್ ಸೇರಿಕೊಂಡಿದ್ದಾರೆ. ಆಟೋ ಚಾಲಕ ರಮೇಶ್ ಬಾಬು ಇದನ್ನು ಗಮನಿಸಿ ಪೂರ್ತಿ ಹಣವನ್ನು ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮಾಲ್ಡೀವ್ಸ್ ಪ್ರಜೆ ಭಾಸ್ಕರ್ ದೂರು ನೀಡಲು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಚಾಲಕ ರಮೇಶ್ ಬಾಬು ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸದ್ಯ ರಮೇಶ್ ಬಾಬು ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *