ಊಟದ ದುಡ್ಡಿಗಾಗಿ ಎಟಿಎಂನಲ್ಲಿ ಮಚ್ಚು ಬೀಸಿದ್ನಂತೆ ಮಧುಕರ್!

Public TV
1 Min Read

ಬೆಂಗಳೂರು: ನಗರದ ಎಟಿಎಂನಲ್ಲಿ ಜ್ಯೋತಿ ಎಂಬವರ ಮೇಲೆ ಹಲ್ಲೆ ಮಾಡಿದ್ದ ಸೈಕೋ ಮಧುಕರ್ ರೆಡ್ಡಿ ಪೊಲೀಸರ ಮುಂದೆ ಒಂದೊಂದೇ ಮಾಹಿತಿ ಬಾಯ್ಬಿಡ್ತಿದ್ದಾನೆ. ಈತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಕಾರಣ ಊಟಕ್ಕಾಗಿ ಅಂತೆ. ಹೌದು, ಪೊಲೀಸರ ಮುಂದೆ ಅವನೇ ಹೇಳಿರೋ ಪ್ರಕಾರ ಹಣವಿಲ್ಲದೆ ಎರಡು ದಿನದಿಂದ ಊಟ ಮಾಡಿರಲಿಲ್ಲವಂತೆ.

ಮೂರು ವರ್ಷಗಳ ಹಿಂದೆ ಆಂಧ್ರದಲ್ಲಿ ಕೊಲೆ ಮಾಡಿ, ಬೆಂಗಳೂರಿಗೆ ಓಡಿ ಬಂದೆ. ಇದ್ದ ಬದ್ದ ದುಡ್ಡು ಮುಗಿದ ಮೇಲೆ ಎರಡು ದಿನ ಊಟ ಇಲ್ಲದೇ ಹಾಗೆ ಇದ್ದೆ. ಕೊನೆಗೆ ಊಟಕ್ಕೆ ದುಡ್ಡು ಪಡೆಯೋ ಉದ್ದೇಶದಿಂದ ಹಲವಾರು ಎಟಿಎಂಗಳ ಮುಂದೆ ವಾಚ್ ಮಾಡಿದ್ದೆ. ಆದ್ರೆ ಜನ ದಟ್ಟಣೆಯ ಕಾರಣಕ್ಕೆ ಭಯ ಆಗಿತ್ತು. ಕೊನೆಗೆ ಕಾರ್ಪೊರೇಷನ್ ಎಟಿಎಂಗೆ ಮಹಿಳೆಯೊಬ್ಬರು ಹೋಗಿದ್ದನ್ನು ನೋಡಿ ಅಂದು ಬೆಳಗ್ಗೆ ಯಾರೂ ಇಲ್ಲದಿದ್ದಾಗ ಎಟಿಎಂಗೆ ನುಗ್ಗಿದೆ. ಎಟಿಎಂ ಕಾರ್ಡ್ ಕಸಿದುಕೊಂಡು ಪಿನ್ ನಂಬರ್ ಕೇಳಿದೆ. ಆದ್ರೆ ಅವರು ಹೇಳಲಿಲ್ಲ. ಹಾಗಾಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಅಂತ ಪೊಲೀಸರ ಮುಂದೆ ಹೇಳಿದ್ದಾನೆ.

ಆಂಧ್ರದಲ್ಲಿ ಕೊಲೆ ಮಾಡಿ ಬಂದಿದ್ದ ಮಧುಕರ್, ದುಡ್ಡು ಮುಗಿದ ಮೇಲೆ ಕಬ್ಬನ್‍ಪಾರ್ಕ್‍ನಲ್ಲಿ ಎರಡು ದಿನ ಕಾಲ ಕಳೆದಿದ್ದ. ಅದೆಲ್ಲಿಂದಲೋ ಒಂದು ಮಚ್ಚನ್ನು ಕದ್ದಿದ್ದ. ಇದೇ ಮಚ್ಚನ್ನು ಎಟಿಎಂನಲ್ಲಿ ಬಳಸಿದೆ ಅಂತ ಹೇಳಿದ್ದಾನೆ. ಸದ್ಯ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು ಮದನಪಲ್ಲಿಯಲ್ಲಿ ಬೀಡು ಬಿಟ್ಟು ಮತ್ತಷ್ಟು ಮಾಹಿತಿ ಕಲೆ ಹಾಕ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *