ಚರ್ಚ್‌ನಲ್ಲಿ ಪಾದ್ರಿ ಮೇಲೆ ಭಿನ್ನಮತೀಯ ಗುಂಪಿನಿಂದ ಹಲ್ಲೆ

Public TV
1 Min Read

ತಿರುವನಂತಪುರಂ: ಚರ್ಚ್‌ ಪಾದ್ರಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಥಲಯೋಲಪರಂಬುವಿನ ವಾರಿಕಂಕುನ್ನುವಿನ ಪ್ರಸಾದಗಿರಿ ಚರ್ಚ್‌ನಲ್ಲಿ ನಡೆದಿದೆ.

ಪವಿತ್ರ ಬಲಿದಾನದ ಸಮಯದಲ್ಲಿ ಪಾದ್ರಿಯ ಮೇಲೆ ಹಲ್ಲೆ ನಡೆಸಲಾಗಿದೆ. ಎರ್ನಾಕುಲಂ-ಅಂಗಮಾಲಿ ಆರ್ಚ್‌ಡಯೋಸಿಸ್‌ನಲ್ಲಿರುವ ಚರ್ಚ್‌ನಲ್ಲಿ ಭಿನ್ನಮತೀಯ ಪಾದ್ರಿಯ ನೇತೃತ್ವದ ಗುಂಪೊಂದು ಈ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಫಾದರ್ ಜಾನ್ ತೊಟ್ಟುಪುರಂ ಗಾಯಗೊಂಡಿದ್ದಾರೆ.

ಘರ್ಷಣೆಯಲ್ಲಿ ಹಲವರು ಗಾಯಗೊಂಡರು. ಘಟನೆಯ ನಂತರ, ಥಲಯೋಲಪರಂಬು ಪೊಲೀಸರು ಚರ್ಚ್‌ಗೆ ಬೀಗ ಹಾಕಿದ್ದಾರೆ.

ಏಕೀಕೃತ ಪವಿತ್ರ ಬಲಿಪೂಜೆಯ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚ್‌ನಲ್ಲಿ ಈ ಘರ್ಷಣೆ ಆಗಿದೆ. ಪ್ರಸಾದಗಿರಿ ಚರ್ಚ್‌ನ ಉಸ್ತುವಾರಿ ವಹಿಸಿರುವ ಪಾದ್ರಿ ಫಾದರ್ ಜಾನ್ ತೊಟ್ಟುಪುರಂ ಅವರು ಪವಿತ್ರ ಬಲಿಪೂಜೆಯನ್ನು ಸಲ್ಲಿಸುತ್ತಿದ್ದಾಗ ಗುಂಪೊಂದು ಗಲಾಟೆ ಮಾಡಿತ್ತು.

Share This Article