ಬಾಡಿಗೆ ವಿಚಾರಕ್ಕೆ ಕಿರಿಕ್ – ಕುಡುಕರಿಂದ ಆಟೋ ಚಾಲಕನ ಮೇಲೆ ಬಿಯರ್ ಬಾಟಲ್‍ನಿಂದ ಹಲ್ಲೆ

Public TV
1 Min Read

ದಾವಣಗೆರೆ: ಆಟೋ ಬಾಡಿಗೆ ವಿಚಾರಕ್ಕೆ ಕುಡುಕರು ಚಾಲಕನ ತೆಲೆಗೆ ಬಿಯರ್ ಬಾಟಲ್‍ನಿಂದ ಹಲ್ಲೆ ಮಾಡಿರುವುದು ದಾವಣಗೆರೆಯ (Davanagere) ನಿಟ್ಟುವಳ್ಳಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಆಟೋ ಚಾಲಕನನ್ನು ಕೊಳೆನಹಳ್ಳಿ ಚಂದ್ರಯ್ಯ (27) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಬಾರ್‌ನಲ್ಲಿ ಕುಡಿದು ಮನೆಗೆ ಹೋಗಲು ಇಬ್ಬರು ಕುಡುಕರು ಆಟೋ ನಿಲ್ಲಿಸಿದ್ದಾರೆ. ಬಳಿಕ ಬಾಡಿಗೆ ಹಣ ಜಾಸ್ತಿ ಹೇಳ್ತಿಯಾ ಎಂದು ಆಟೋ ಚಾಲಕನಿಗೆ ಥಳಿಸಿ, ಬಾಟಲ್‍ನಿಂದ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಕೂಡಲೇ ಸ್ಥಳೀಯರು ಹಲ್ಲೆಗೊಳಗಾದ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಂದ್ರಯ್ಯಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share This Article