ಸ್ವಿಗ್ಗಿ-ಎಂಪೈರ್ ಸಿಬ್ಬಂದಿ ಗಲಾಟೆ – ರಾತ್ರೋರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ದಾಂಧಲೆ

Public TV
1 Min Read

ಬೆಂಗಳೂರು: ಸ್ವಿಗ್ಗಿ ಹುಡುಗರು ಎಂಪೈರ್ ಹೋಟೆಲ್‍ನ್ನ ಚಿಂದಿ ಉಡಾಯಿಸಿರುವ ಘಟನೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.

ತಡರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್ ಹಾಗೂ ಮ್ಯಾನೇಜರ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿದೆ. ಈ ವೇಳೆ ಸ್ವಿಗ್ಗಿ ಹುಡುಗ ಹರೀಶ್ ಮೇಲೆ ಹಲ್ಲೆಯಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು ಇಬ್ಬರನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿ ಬಿಟ್ಟಿ ಕಳಿಸಿದ್ರು.

ಠಾಣೆಯಿಂದ ಹೊರ ಬರುತ್ತಿದ್ದಂತೆ ಸ್ವಿಗ್ಗಿ ಹುಡುಗರು ಕನ್ನಡಿಗರ ಮೇಲೆ ನಾರ್ಥ್ ಇಂಡಿಯನ್ಸ್ ದಬ್ಬಾಳಿಕೆ ಮಾಡಿದ್ದಾರೆಂದು ಕನ್ನಡ ಪರ ಸಂಘಟನೆಯವರನ್ನ ಕರೆಸಿ ಗಲಾಟೆ ಮಾಡಿದ್ದಾರೆ. ಮತ್ತೆ ಪೊಲೀಸರು ಸಮಾಧಾನ ಮಾಡಿ ಕಳುಹಿಸಿದ್ರು. ಇಷ್ಟಾದ್ರೂ ಸುಮ್ಮನಾಗದ ಸ್ವಿಗ್ಗಿ ಬಾಯ್ಸ್ 30 ರಿಂದ 40 ಜನರ ಗ್ಯಾಂಗ್ ಕಟ್ಟಿಕೊಂಡು ಬಂದು ಎಂಪೈರ್ ಹೋಟೆಲ್‍ಗೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ.

ಈ ಸಂಬಂಧ ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಎಸಿಪಿ ಕರಿಬಸವಯ್ಯ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *