ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

Public TV
1 Min Read

-ಡಬಲ್ ಸಂಭ್ರಮದಲ್ಲಿ ಕೇಜ್ರಿವಾಲ್
-ನನ್ನೊಂದಿಗೆ ನೀವೆಲ್ಲರೂ ಇರಬೇಕು

ನವದೆಹಲಿ: ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ದೆಹಲಿ ಜನತೆ ತಮ್ಮ ಮಗನಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ದೆಹಲಿಯಲ್ಲಿ 24 ಗಂಟೆ ವಿದ್ಯುತ್, ಪ್ರತಿ ಮಗುವಿನ ಶಿಕ್ಷಣ, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕುಟುಂಬಗಳ ಗೆಲವು ಇದಾಗಿದೆ. ಇಂದು ದೆಹಲಿಯ ಜನತೆ ಹೊಸ ರಾಜಕೀಯ ಜನ್ಮ ನೀಡಿದ್ದು, ಕೆಲಸ ಮಾಡಿದವರಿಗೆ ತಮ್ಮ ಮತ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿ ಧನ್ಯವಾದ ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

ಇದು ನಮ್ಮ ಗೆಲುವಲ್ಲ, ದೆಹಲಿಯ ಪ್ರತಿಯೊಂದು ಕುಟುಂಬ, ಭಾರತ ಮಾತೆಯ ಗೆಲುವು. ಇಂದು ಮಂಗಳವಾರ, ಆಂಜನೇಯನವಾರ. ಇಂದು ಆಂಜನೇಯ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾನೆ. ಮುಂದಿನ ಐದು ವರ್ಷಗಳಲ್ಲಿಯೂ ನಮ್ಮ ಸರ್ಕಾರ ಜನತೆಯ ಆಶಯದಂತೆ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಮತ್ತಷ್ಟು ಸುಂದರವಾಗಿಸೋಣ. ಇದೇ ವೇಳೆ ತಮ್ಮ ಪತ್ನಿಯ ಹುಟ್ಟುಹಬ್ಬವಿದೆ ಎಂಬ ವಿಚಾರವನ್ನು ತಿಳಿಸಿ ಡಬಲ್ ಖುಷಿಯಲ್ಲಿದ್ದೇನೆ ಎಂದರು.

ದೆಹಲಿಯ ಜನತೆ ಬಹಳ ಆಸೆಗಳಿಂದ ನಮಗೆ ಮತ ನೀಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕೆಲಸ ಇರಲಿದೆ. ಕೇವಲ ನನ್ನಿಂದ ಮಾತ್ರ ಇದು ಸಾಧ್ಯವಲ್ಲ. ಪ್ರತಿಯೊಬ್ಬರು ನನ್ನ ಕೆಲಸದೊಂದಿಗೆ ಕೈ ಜೋಡಿಸಿದ್ರೆ ದೆಹಲಿಯನ್ನು ಇನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *