ನವದೆಹಲಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಲು ಧೈರ್ಯ ಮಾಡಿದರೆ, ನಾವು ಏನು ಮಾಡುತ್ತೇವೆಂದು ಅವರಿಗೆ ತಿಳಿದಿದೆ ಎಂದು ಸಶಸ್ತ್ರ ಪಡೆಗಳು ಬಲವಾದ ಎಚ್ಚರಿಕೆ ನೀಡಿವೆ.
ಭಾರತೀಯ ನೌಕಾಪಡೆಯು ಸಂಪೂರ್ಣ ಕಡಲ ಪ್ರಾಬಲ್ಯವನ್ನು ಹೊಂದಿದ್ದು, ಪಾಕಿಸ್ತಾನದಿಂದ ಬರುವ ಯಾವುದೇ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಭಾರಿ ಹೊಡೆತ ನೀಡಲು ಸಿದ್ಧವಾಗಿದೆ ಎಂದು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಹೇಳಿದ್ದಾರೆ.
ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಚಲನಶೀಲ ಕ್ರಮಗಳ ಜೊತೆಗೆ, ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಅಗಾಧ ಕಾರ್ಯಾಚರಣೆಯ ಶಕ್ತಿಯು ನಿನ್ನೆ ಪಾಕಿಸ್ತಾನದ ತುರ್ತು ಕದನ ವಿರಾಮ ಮನವಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳು ಭಾನುವಾರ ಮಿಲಿಟರಿ ಕಾರ್ಯಾಚರಣೆಗಳು, ನೌಕಾ ಕಾರ್ಯಾಚರಣೆಗಳು ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ಪಾಕಿಸ್ತಾನದೊಳಗಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಗಳಿಸಿರುವ ಬಗ್ಗೆ ಮಾತನಾಡಿದ್ದಾರೆ.