ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

Public TV
1 Min Read

ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಗತಿಸಿದರೂ, ಅವರ ಕುಟುಂಬಕ್ಕೆ ನಟ ನಟಿಯರು ಸಾಂತ್ವಾನ ಹೇಳುತ್ತಲೇ ಇದ್ದಾರೆ. ಪುನೀತ್ ನಿಧನದ ದಿನದಂದು ಮಗುವಿನಂತೆ ಕಣ್ಣೀರಿಟ್ಟಿದ್ದ ನಟ ಅರ್ಜುನ್ ಸರ್ಜಾ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.  ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

ಪುಟಾಣಿ ಪುನೀತ್ ಅವರನ್ನು ಎತ್ತಿ ಆಡಿಸಿದ ದಿನಗಳನ್ನು ನೆನಪಿಸಿಕೊಂಡ ಅರ್ಜುನ್ ಸರ್ಜಾ, ಇಂತಹ ಮಹಾನ್ ಕಲಾವಿದನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅವರು ಎಲ್ಲಿಯೂ ಹೋಗಿಲ್ಲ, ನಮ್ಮೊಂದಿಗೆ ಸದಾ ಇರುತ್ತಾರೆ ಎಂದರು. ಇದನ್ನು ಓದಿ : ಕನ್ನಡಕ್ಕೆ ಅಮ್ಮಾವ್ರ ಗಂಡ ನಾಯಕಿಯ ಮಗಳು

ಈ ಹಿಂದೆ ಪುನೀತ್ ಅವರನ್ನು ಎತ್ತಿಕೊಂಡಿದ್ದ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಾಂತಿ ಕೋರಿದ್ದರು ಅರ್ಜುನ್ ಸರ್ಜಾ. ಪುನೀತ್ ಅವರನ್ನು ಬಾಲ್ಯದಲ್ಲಿ ಹಾಗೆ ಎತ್ತಿಕೊಳ್ಳುವ ಭಾಗ್ಯ ಹಲವು ಬಾರಿ ಸಿಕ್ಕಿದೆ ಎಂದು ನೆನಪಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *