ಅನಿರುದ್ದಗೆ ಸವಾಲು ಹಾಕಿದ ಜೊತೆ ಜೊತೆಯಲಿ ಸೀರಿಯಲ್ ಟೀಮ್

Public TV
1 Min Read

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರ ಹಾಕಿದ ನಂತರ, ಆರ್ಯವರ್ಧನ್ ಪಾತ್ರವನ್ನು ಯಾರು ಮಾಡಲಿದ್ದಾರೆ? ಅನಿರುದ್ಧ ಇಲ್ಲದೇ ಸೀರಿಯಲ್ ಮುಂದುವರೆಯುತ್ತಾ? ಅವರಿಲ್ಲದೇ ಧಾರಾವಾಹಿಯನ್ನು ಜನ ನೋಡುತ್ತಾರೆ ಹೀಗೆ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಅನಿರುದ್ಧ ಇಲ್ಲದೇ ನಾವು ಧಾರಾವಾಹಿ ನೋಡುವುದಿಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಆದರೂ, ಅನಿರುದ್ಧ ಅವರಿಗೆ ಸವಾಲು ಹಾಕುವಂತಹ ಕೆಲಸ ನಡೆದಿದೆ.

ಸೀರಿಯಲ್ ಗೆ ಅನಿರುದ್ಧ ಅವರಿಗಿಂತ ಕಂಟೆಂಟ್ ಮುಖ್ಯ ಎಂದು ಈ ಹಿಂದೆಯೇ ನಿರ್ಮಾಪಕ ಆರೂರು ಜಗದೀಶ್ ಹೇಳಿಕೆ ನೀಡಿದ್ದರು. ಕಥೆಯೇ ಧಾರಾವಾಹಿಯ ಹೀರೋ ಎಂದು ಮಾಧ್ಯಮಗಳ ಮುಂದೆಯೇ ಮಾತನಾಡಿದ್ದರು. ಈಗ ಆಡಿದಂತೆಯೇ ಮಾಡಿ ತೋರಿಸಿದ್ದಾರೆ. ಅನಿರುದ್ಧ ಅವರನ್ನು ಕೈ ಬಿಟ್ಟು ಧಾರಾವಾಹಿಯನ್ನು ಮುಂದುವರೆಸಿದ್ದಾರೆ. ಕೇವಲ ಅನಿರುದ್ಧ ಅವರನ್ನು ಮಾತ್ರವಲ್ಲ, ಆರ್ಯವರ್ಧನ್ ಪಾತ್ರವಿಲ್ಲದೇ ಧಾರಾವಾಹಿ ನಡೆಸುತ್ತೇವೆ ಎನ್ನುವ ಸೂಚನೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

ಆರ್ಯವರ್ಧನ್ ಪಾತ್ರಕ್ಕಾಗಿ ಹಲವು ಕಲಾವಿದರನ್ನು ಹುಡುಕಿದ್ದರು. ಕೊನೆಯ ಕ್ಷಣದಲ್ಲಿ ಆ ಪಾತ್ರವನ್ನು ಬಿಟ್ಟು, ಹೊಸದೊಂದು ಪಾತ್ರವನ್ನು ಸೃಷ್ಟಿ ಮಾಡಿದೆ ಧಾರಾವಾಹಿ ತಂಡ. ಆ ಹೊಸ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಥೆಗೆ ಬೇರೊಂದು ತಿರುವು ದೊರೆತಿದೆ. ಈ ಹೊಸ ಕಥೆಯನ್ನು ನೋಡುಗ ಹೇಗೆ ತಗೆದುಕೊಳ್ಳುತ್ತಾನೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *