3 ವರ್ಷದ ಬಾಲಕನ ಕುತ್ತಿಗೆಗೆ ಬಿಸಿ ಸೌಟಿನಲ್ಲಿ ಹೊಡೆದು ಅಂಗನವಾಡಿ ಸಹಾಯಕಿಯಿಂದ ಹಲ್ಲೆ

Public TV
1 Min Read

ಚಾಮರಾಜನಗರ: ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋಗಿದ್ದಾನೆ ಎಂದು ಸಹಾಯಕಿಯೊಬ್ಬಳು ಬಾಲಕನಿಗೆ ಸಾಂಬರ್ ನ ಬಿಸಿ ಸೌಟಿನಲ್ಲಿ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಸವಪುರ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಜಡೆಸ್ವಾಮಿ ಎಂಬವರ ಮೂರು ವರ್ಷದ ಹಾರ್ಥಿಕ್ ಎಂಬಾತ ಹಲ್ಲೆಗೊಳಗಾದ ಬಾಲಕ. ಬಾಲಕ ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋದ ಎಂಬ ಕಾರಣಕ್ಕೆ ಸಹಾಯಕಿ ಶಿವಮಲ್ಲಮ್ಮ ಸಾಂಬರ್ ನ ಬಿಸಿ ಸೌಟಿನಲ್ಲಿ ಆತನ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ಬಾಲಕನ ಕುತ್ತಿಗೆಯ ಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ.

ಅಂಗನವಾಡಿ ಸಹಾಯಕಿ ಸರಿಯಾಗಿ ಮಗುವನ್ನು ನೋಡಿಕೊಂಡಿದ್ದರೆ ಮಗು ಬೇರೆ ಅಂಗನವಾಡಿಗೆ ಹೋಗುತ್ತಿರಲಿಲ್ಲ. ಸಹಾಯಕಿ ಬೇಜವಾಬ್ದಾರಿಯಿಂದ ನಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಹಾರ್ಥಿಕ್ ಪೋಷಕರು ರಾಮಸಮುದ್ರದ ಪೂರ್ವ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *