ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

Public TV
1 Min Read

ಹೈದ್ರಾಬಾದ್: ಇಲ್ಲಿನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ನಡೆದ ಅಪಘಾತದಲ್ಲಿ ಸಚಿವರೊಬ್ಬರ ಪುತ್ರ ಸೇರಿದಂತೆ ಇಬ್ಬರು ಮೃತರಾದ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಆಂಧ್ರ ಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ನಾರಾಯಣ್ ಅವರ ಪುತ್ರ ನಿಶಿತ್ ನಾರಾಯಣ್ ಹಾಗೂ ಅವರ ಸ್ನೇಹಿತ ಸಾವಿಗೀಡಾಗಿದ್ದಾರೆ. ಮೃತ ನಿಶಿತ್ ನಾರಾಯಣ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ನಡೆದಿದ್ದೇನು?: ಕುಡಿದು ಮತ್ತಿನಲ್ಲಿ ನಿಶಿತ್ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ವೇಗವಾಗಿ ಚಲಾಯಿಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಮೆಟ್ರೋ ರೈಲಿಗಾಗಿ ಹಾಕಲಾಗಿದ್ದ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾದವು. ಕೂಡಲೇ ಸ್ಥಳೀಯರ ಸಹಾಯದಿಂದ ನಿಷಿತ್ ಹಾಗೂ ರಾಜಾ ರವಿವರ್ಮ ಅವರನ್ನು ಉಸ್ಮಾನಿಯಾ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಷಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಮಗನ ಸಾವಿನ ಸುದ್ದಿ ಕೇಳಿ ಅಮೆರಿಕ ಪ್ರವಾಸದಲ್ಲಿದ್ದ ಸಚಿವ ನಾರಾಯಣ್ ಹೈದ್ರಾಬಾದ್‍ಗೆ ವಾಪಾಸ್ಸಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *