ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

Public TV
2 Min Read

ಬಾಲಿವುಡ್ ನ ಖ್ಯಾತ ತಾರೆ, ರಾಷ್ಟ್ರ ಪ್ರಶಸ್ತಿ ವಿಜೇತೆ ಹಾಗೂ ವಿವಾದಗಳ ಮೂಲಕವೇ ಸದಾ ಸದ್ದು ಮಾಡುವ ಕಂಗನಾ ರಣಾವತ್, ಸಿನಿಮಾ ಹೀರೋಯಿನ್ ಆಗುವುದಕ್ಕೆ ಒಬ್ಬ ಜ್ಯೋತಿಷಿ ಕಾರಣವಂತೆ. ಇದನ್ನು ಬಹಿರಂಗ ಪಡಿಸಿದ್ದು ಬೇರೆ ಯಾರೂ ಅಲ್ಲ, ಬಾಹುಬಲಿ ಚಿತ್ರದ ಹೀರೋ ಪ್ರಭಾಸ್. ಇದನ್ನೂ ಓದಿ : ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

ಕಂಗನಾ ಹಿಮಾಚಲ ಪ್ರದೇಶದ ಭಾಮ್ಲಾ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವರು ಕಂಗನಾ. ಮಧ್ಯಮ ವರ್ಗದ ಕುಟುಂಬದ ಕೂಸು. ಇಂತಹ ಊರಲ್ಲಿ ಹುಟ್ಟಿದ ಹುಡುಗಿ ಬಾಲಿವುಡ್ ಪ್ರವೇಶ ಮಾಡುವುದು ಸಣ್ಣ ಮಾತೇನೂ ಅಲ್ಲ. ಸಣ್ಣವಳಿರುವಾಗ ಊಹಿಸಿಕೊಳ್ಳಲೂ ಅಸಾಧ್ಯ. ಇಂತಹ ವೇಳೆಯಲ್ಲೇ ಜ್ಯೋತಿಷಿಯೊಬ್ಬ “ಮಗು, ನೀನು ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ನಟಿಯಾಗುತ್ತೀಯಾ” ಅಂತ ಭವಿಷ್ಯ ನುಡಿದಿದ್ದನಂತೆ. ಆಕೆ ಅದನ್ನು ಕಂಗನಾ ಸೀರಿಯಸ್ ಆಗಿ ತಗೆದುಕೊಂಡಿರಲಿಲ್ಲವಂತೆ. ನಂಬಲೂ ಇಲ್ಲವಂತೆ. ದುಡ್ಡಿಗಾಗಿ ಆ ಜ್ಯೋತಿಷಿ ಏನೋ ಒಂದು ಹೇಳಿದ್ದಾನೆ. ಅದನ್ನ್ಯಾಕೆ ಗಂಭೀರವಾಗಿ ತಗೆದುಕೊಳ್ಳಲಿ ಎಂದು ಸುಮ್ಮನಿದ್ದಳಂತೆ. ಕೊನೆಗೊಂದು ದಿನ ಆ ಜ್ಯೋತಿಷಿ ಹೇಳಿದ್ದೇ ಸತ್ಯವಾಯಿತು. ಇದನ್ನೂ ಓದಿ : ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

ಕಂಗನಾ ಇದೀಗ ಬಾಲಿವುಡ್ ನ ಸೂಪರ್ ಸ್ಟಾರ್ ನಟಿ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಾಗರೀಕರ ಅತ್ಯುನ್ನತ ಗೌರವಗಳಿಗೂ ಕಂಗನಾ ಪಾತ್ರರಾಗಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

ಅಷ್ಟಕ್ಕೂ ಈ ಗುಟ್ಟನ್ನು ಪ್ರಭಾಸ್ ಬಿಟ್ಟುಕೊಟ್ಟಿದ್ದಕ್ಕೂ ಕಾರಣವಿದೆ. ಈಗ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿದೆ. ಪ್ರಭಾಸ್ ಈ ಸಿನಿಮಾದಲ್ಲಿ ಈ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಸಿನಿಮಾದ ಕಥೆಯನ್ನು ಹೇಳುತ್ತಾ ಕಂಗನಾ ತಮಗೆ ಹೇಳಿದ್ದ ಕಂಗನಾ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

ಕಂಗನಾ ಮತ್ತು ಪ್ರಭಾಸ್ ಒಟ್ಟಿಗೆ ನಟಿಸಿದ್ದ ‘ಏಕ್ ನಿರಂಜನ್’ ತೆಲುಗು ಸಿನಿಮಾ ಶೂಟಿಂಗ್ ವೇಳೆ ಸ್ವತಃ ಕಂಗನಾ ಅವರೇ ಈ ವಿಷಯವನ್ನು ಪ್ರಭಾಸ್ ಜೊತೆ ಹಂಚಿಕೊಂಡಿದ್ದರಂತೆ.

Share This Article
Leave a Comment

Leave a Reply

Your email address will not be published. Required fields are marked *