21 ಜನರನ್ನ ತುಂಬಿಕೊಂಡು ವಿಜಯಪುರಕ್ಕೆ ಹೋಗ್ತಿದ್ದ ಅಂಬುಲೆನ್ಸ್ ಚಾಲಕ ಅರೆಸ್ಟ್

Public TV
1 Min Read

ಚಿಕ್ಕಮಗಳೂರು: ಒಬ್ಬರಿಗೆ 1,800ರಿಂದ 2,000 ರೂ.ನಂತೆ ಪಡೆದು 21 ಜನರನ್ನು ಕರೆದುಕೊಂಡು ಮಂಗಳೂರಿನಿಂದ ವಿಜಯಪುರಕ್ಕೆ ಹೋಗುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ದಾವಣಗೆರೆ ಮೂಲದ ಭೀಮಾ ಅಂಬುಲೆನ್ಸ್ ಸರ್ವಿಸ್ ಎಂಬ ಖಾಸಗಿ ಸಂಸ್ಥೆಯ ಚಾಲಕ ಬಸವರಾಜ್ ಬಂಧಿತ ವ್ಯಕ್ತಿ. ಬಸವರಾಜ್ ದಾವಣಗೆರೆಯಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಬಂದಿದ್ದ. ಅಲ್ಲಿದ್ದ ವಿಜಯಪುರ ಹಾಗೂ ಮುದ್ದೆಬಿಹಾಳ ಮೂಲದ ಸುಮಾರು 21 ಜನರನ್ನ ಅಂಬುಲೆನ್ಸ್‌ನಲ್ಲಿ ಕರೆತಂದಿದ್ದಾನೆ.

ಅಂಬುಲೆನ್ಸ್ ಅನ್ನು ಯಾರೂ ಚೆಕ್ ಮಾಡುವುದಿಲ್ಲ ಎಂದು ತಿಳಿಸಿದ್ದ ಬಸವರಾಜ್ ಪ್ರತಿಯೊಬ್ಬರಿಂದ 1,800ರಿಂದ 2,000 ಸಾವಿರ ಎಂದು ಬಾಡಿಗೆ ಮಾತನಾಡಿಕೊಂಡಿದ್ದ. ಎಲ್ಲರನ್ನೂ ವಿಜಯಪುರಕ್ಕೆ ಬಿಟ್ಟು ದಾವಣಗೆರೆಗೆ ವಾಪಸ್ ಬಂದರೆ ಆಯ್ತು ಎಂದು ಪ್ಲಾನ್ ಮಾಡಿದ್ದ. ಆದರೆ ಮಂಗಳೂರಿನಿಂದ ಬಾಳೆಹೊನ್ನೂರಿಗೆ ಬರುತ್ತಿದ್ದಂತೆ ಬಾಳೆಹೊನ್ನೂರು ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡಿದಾಗ, ಜಾಗವಿಲ್ಲದೆ ಒಬ್ಬರ ಮೇಲೊಬ್ಬರಂತೆ 21 ಜನ ಕುಳಿತಿದ್ದರು. ಬಳಿಕ ಎಲ್ಲರನ್ನೂ ಕೆಳಗಿಸಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಎಲ್ಲರನ್ನೂ ಎನ್.ಆರ್.ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೊರೊನಾ ಚಿಕಿತ್ಸಾ ಘಟಕರದಲ್ಲಿ ಇರಿಸಿದ್ದಾರೆ. ಪೊಲೀಸರು ವಾಹನವನ್ನ ತಪಾಸಣೆಗೆ ಮುಂದಾಗುತ್ತಿದ್ದಂತೆ ಅಂಬುಲೆನ್ಸ್ ಚಾಲಕ ಬಸವರಾಜ್ ಪರಾರಿಯಾಗಲು ಯತ್ನಿಸಿದ್ದ. ಆದರೆ ಅವನನ್ನ ಹಿಡಿದ ಪೊಲೀಸರು ಒಂದೆರಡು ಗೂಸಾ ಕೊಟ್ಟು, ಠಾಣೆಗೆ ಕೊರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಕೊರೊನಾ ಚಿಕಿತ್ಸಾ ಘಟಕದಲ್ಲಿ ಬಿಟ್ಟಿದ್ದಾರೆ. 21 ಜನರಲ್ಲಿ 1ರಿಂದ 10ವರ್ಷದೊಳಗಿನ ಏಳು ಮಕ್ಕಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *