ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಿಸಿ ಮಾನವೀಯತೆ ಮೆರೆದ ಚಾಲಕ!

Public TV
1 Min Read

ಚಿಕ್ಕಮಗಳೂರು: ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಣೆ ಮಾಡಿ ಖಾಸಗಿ ಅಂಬುಲೆನ್ಸ್ ಚಾಲಕ ಮಾನವಿಯತೆ ಮೆರೆದಿದ್ದಾರೆ.

ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿ ಜಿಶಾನ್ ಅಸಾದ್ ಮಾನವೀಯತೆ ಮೆರೆದ ಚಾಲಕ. ಚಿಕ್ಕಮಗಳೂರು ಹಾಸನ ಮಾರ್ಗದ ಕುಪ್ಪಳ್ಳಿ ಬಳಿ ಬರುತ್ತಿದ್ದಾಗ ಕೆಎಸ್‍ಆರ್ ಟಿಸಿ ಬಸ್ ಮತ್ತು ಮಿನಿ ಟೆಂಪೋ ನಡುವೆ ಡಿಕ್ಕಿಯಾಗಿದೆ. ಟೆಂಪೋದಲ್ಲಿದ್ದ 10 ಜನರಿಗೆ ಗಂಭೀರ ಗಾಯಗಳಾಗಿತ್ತು.

10 ಜನ ಸವಾರರು ರಸ್ತೆಯಲ್ಲಿ ಬಿದ್ದು ರಕ್ತದ ಮಡುವಿನಲ್ಲಿ ನರಾಳಾಡುತ್ತಿದ್ದರು. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಅಪರಿಚಿತರನ್ನು ಜಿಶಾನ್ ಅಸಾದ್ ಕೂಡಲೇ ಹಾಸನದ ಜಿಲ್ಲಾಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಅಂಬುಲೆನ್ಸ್ ಆದರೂ ಜಿಶಾಬ್ ಬಿಡಿಗಾಸು ಪಡೆಯದೆ ವಾಪಾಸ್ ಆಗಿದ್ದಾರೆ.

ಸದ್ಯ ಅಂಬುಲೈನ್ಸ್ ಚಾಲಕನ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಾತ್ರವಾಗಿದೆ.

Share This Article
1 Comment

Leave a Reply

Your email address will not be published. Required fields are marked *