ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

Public TV
1 Min Read

ಚಾಮರಾಜನಗರ: ಸುಳ್ವಾಡಿ ದೇವಾಲಯರ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಅಂಬಿಕಾ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಅಂಬಿಕಾ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ.

ಪ್ರಮುಖ ಆರೋಪಿಗಳಾದ ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಮೂವರು ಆರೋಪಿಗಳೊಂದಿಗೆ ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದರು. ಅಲ್ಲಿವರೆಗೂ ಅಂಬಿಕಾ ಸುಮ್ಮನಿದ್ದಳು. ಆದರೆ ಮನೆಗೆ ಹೋಗಿ ಮಹಜರ್ ಮಾಡಿ ವಾಪಸ್ ಬರುವಾಗ ಹೊರಗಡೆ ಜಮಾಸಿದ್ದ ಜನರನ್ನು ನೋಡಿ ಈ ವೇಳೆ 2ನೇ ಆರೋಪಿ ಅಂಬಿಕಾ ಡ್ರಾಮ ಮಾಡಿದ್ದಾಳೆ.

ಮನೆಯ ಬಳಿ ಪೊಲೀಸರನ್ನು ಕಂಡು ಅಂಬಿಕಾ ರೇಗಾಡಿದ್ದು, ಪೊಲೀಸರು ನಂಗೆ ಮೋಸ ಮಾಡಿದ್ದಾರೆ ಎಂದು ಕೂಗಾಡಿದ್ದಾಳೆ. ಆಗ ಪೊಲೀಸ್ ಮಹಿಳಾ ಪೇದೆ ಅಂಬಿಕಾಳಿಗೆ ಮೊಟಕಿದ್ದು, ಬಲವಂತವಾಗಿ ಆಕೆಯನ್ನು ಕರೆದುಕೊಂಡು ಬರುತ್ತಿದ್ದರು. ಪೊಲೀಸರು ನಮ್ಮ ಮನೆಯ ಬೀಗ ತೆಗೆದುಕೊಂಡು ಅವರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ. ನಾನು ಪೊಲೀಸರನ್ನು ನಂಬಿದ್ದೆ. ಆದರೆ ಈಗ ಪೊಲೀಸ್ ಇಲಾಖೆ ಮೋಸ ಮಾಡಿದೆ. ನಾನು ಸಿಸಿಬಿಗೆ ಕೇಸ್ ಒಪ್ಪಿಸುತ್ತೇನೆ ಎಂದು ಅಂಬಿಕಾ ಕೂಗಾಡಿದ್ದಾಳೆ.

ಅಂಬಿಕಾ ಮನೆಯನ್ನು ಮಹಜರ್ ಮಾಡುವಾಗ ಆಕೆಯ ಮನೆಯಲ್ಲಿ ವಿಷದ ಬಾಟೆಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ವಿಚಾರಣೆ ವೇಳೆ ಆರೋಪಿ ಅಂಬಿಕಾ, ನಾವೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಳು. ಆದರೆ ಮನೆಗೆ ಹೋಗೋವರೆಗೂ ಸುಮ್ಮನಿದ್ದ ಅಂಬಿಕಾ ಜನರನ್ನು ನೋಡಿದ ತಕ್ಷಣ ಅವರ ಮುಂದೆ ಮತ್ತೆ ಒಳ್ಳೆಯವಳಾಗಲೂ ಪೊಲೀಸರ ಮೇಲೆಯೇ ರೇಗಾಡಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *