ಹೊಲಸೆದ್ದು ಹೋದ ಮಂಡ್ಯ ರಾಜಕೀಯ – ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್

Public TV
1 Min Read

ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿದಿದ್ದು, 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್ ಸೋತಾಗ ನಟ ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ನಟ ಅಂಬರೀಶ್ ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಆಗ ದರ್ಶನ್ ಅವರು ಮಂಡ್ಯ ಜನತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ದರ್ಶನ್ ಅವರದ್ದ ಅಥವಾ ಅವರಂತೆ ಬೇರೆಯವರು ಧ್ವನಿ ನೀಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಆಡಿಯೋದಲ್ಲಿ ಏನಿದೆ?
ದರ್ಶನ್: ಮಂಡ್ಯದವರು ನೀವು, ಎಷ್ಟೇ ಆದರೂ ಇವತ್ತು ಈ ಕಡೆಗೆ ಜೈ, ನಾಳೆ ಆ ಕಡೆಗೂ ಜೈ
ಅಭಿಮಾನಿ-1: ಓ…..ಅಣ್ಣಾ ನೀವ್ ಯಾಕೋ ಈಗ ರೂಟ್‍ಗೆ ಬರ್ತಾ ಇದ್ದೀರಿ.
ಅಭಿಮಾನಿ-2: ಅಣ್ಣ ಯಾಕಣ್ಣ, ಕುಮಾರಣ್ಣನಿಗೂ ಜೈ, ಎಸ್‍ಎಂ ಕೃಷ್ಣನಿಗೂ ಜೈ
ದರ್ಶನ್: ಹೂ ಕಣಪ್ಪ ಈ ಸರಿ ಹೋಗಿಬಿಟ್ಟು ಎಲ್ಲಾ ಕುಮಾರಣ್ಣನಿಗೆ ಮಾಡಿಬಿಟ್ರಿ
ಅಭಿಮಾನಿ-2: ಅದಿಕ್ಕೆ ಕಳಿಸಿದ್ರ ಅಣ್ಣನ್ನ ಕುಮಾರಣ್ಣನಿಗೆ ಮಾಡೋಕೆ.
ದರ್ಶನ್: ಪಾಪ ಇದ್ರು ಬಗ್ಗೆ ಯಾರೋ ಸಿಕ್ಕಿದ್ನಪ್ಪ ಎಲ್ಲಿ
ದರ್ಶನ್: ಮಂಡ್ಯ ಅಣ್ಣ, ಅಂಬರೀಶ್ ಅಣ್ಣನ ನಿಲ್ಲಿಸಿಬಿಟ್ಟು ಸೋಲಿಸಿಬಿಟ್ರಿ

Share This Article
Leave a Comment

Leave a Reply

Your email address will not be published. Required fields are marked *