ಇಂದು ಅಕ್ಷಯ ತೃತೀಯ – ಝಗಮಗಿಸುತ್ತಿದೆ ಹೊಸ ಜ್ಯುವೆಲ್ಸ್ ಕಲೆಕ್ಷನ್ಸ್

Public TV
1 Min Read

ಬೆಂಗಳೂರು: ಇಂದು ಅಕ್ಷಯ ತೃತೀಯದ ಶುಭದಿನ. ಬಂಗಾರ ಕೊಳ್ಳೋ ಶುಭ ಘಳಿಗೆ. ಕೆಲ ದಿನಗಳೀಂದ ಚಿನ್ನದ ಬೆಲೆ ಇಳಿಕೆಯಾದ್ದರಿಂದ ಇದೀಗ ಸಿಲಿಕಾನ್ ಸಿಟಿಯಲ್ಲಿ ಈ ಚಿನ್ನದ ಹಬ್ಬದ ಸಂಭ್ರಮ ಜೋರಾಗಿದೆ.

ಹೌದು. ಕಣ್ಣು ಕುಕ್ಕುವಂತೆ ಮಿನುಗೋ ನೆಕ್ಲೆಸ್, ನೋಡುತ್ತಿದ್ದಂತೆ ಅಟ್ರಾಕ್ಟ್ ಮಾಡೋ ಪುಟ್ಟ ಪುಟ್ಟ ಇಯರಿಂಗ್ಸ್, ಬ್ಯಾಂಗಲ್ಸ್ ಹೀಗೆ ಒಂದಕ್ಕಿಂತ ಒಂದು ಸೂಪರ್ ಡಿಸೈನ್ಸ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಇಂದು ಬಂಗಾರ ಖರೀದಿಸಿದ್ರೆ ವೃದ್ಧಿಯಾಗುತ್ತೆ ಎನ್ನುವ ನಂಬಿಕೆ ಇರೋದರಿಂದ, ಆಭರಣ ಪ್ರಿಯರ ಚಿತ್ತ ಗೋಲ್ಡ್ ಶಾಪ್ ನತ್ತ ನೆಟ್ಟಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ, ಚಿನ್ನದ ದರ 150 ರೂ ಕಡಿಮೆಯೇ ಇದೆ. ಜೊತೆಗೆ ಬೆಳ್ಳಿ ದರವೂ 2500 ಕಡಿಮೆಯಾಗಿದೆ. ಇದು ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆಭರಣಗಳ ಬೆಲೆ ಇಳಿಕೆಯ ಜೊತೆಗೆ ಮಾಲೀಕರು ಕೆಲವೊಂದು ಆಫರ್ ಗನ್ನು ಕೂಡ ನೀಡಿದ್ದಾರೆ. ಇದನ್ನೂ ಓದಿ: ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

ಕಾಲ ಬದಲಾದಂತೆ ಜನರ ಅಭಿರುಚಿ ಸಹ ಬದಲಾಗುತ್ತಿದ್ದು, ಎಲ್ಲಾ ಪಕ್ಷದ ರಾಜಕೀಯ ನಾಯಕರುಗಳ ಭಾವಚಿತ್ರಗಳ ಆಭರಣಗಳನ್ನು ತಯಾರಿಸುತ್ತಿದ್ದಾರೆ. ವೆರೈಟಿ- ವೆರೈಟಿ, ಟ್ರೆಂಡಿ ಜ್ಯುವೆಲ್ಸ್ ಮಾರ್ಕೆಟ್ ಗೆ ಲಗ್ಗೆಯಿಟ್ಟಿವೆ. ಇವತ್ತು ಆಭರಣ ಖರೀದಿಸಿದ್ರೆ, ಏನಾಗಬಹುದು ಎಂದು ಕೆಲವರು ಜ್ಯೋತಿಷಿಗಳ ಮೊರೆ ಕೂಡ ಹೋಗಿದ್ದಾರೆ.

ಒಟ್ಟಿನಲ್ಲಿ ಚಿನ್ನ ಕೊಂಡರೆ ಅಕ್ಷಯ ವೃದ್ಧಿಯಾಗುತ್ತೆ ಅನ್ನೋ ನಂಬಿಕೆಯಲ್ಲಿ ಗ್ರಾಹಕರಿದ್ದರೆ ಒಳ್ಳೆ ವಹಿವಾಟಿನ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಇದನ್ನೂ ಓದಿ: ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

Share This Article
Leave a Comment

Leave a Reply

Your email address will not be published. Required fields are marked *