ಕನ್ನಡಿಗ ಸಾಹಸಿಯ ಲೈಫ್ ಸ್ಟೋರಿ ಚಿತ್ರಕ್ಕೆ ಅಕ್ಷಯ್ ಕುಮಾರ್ ಹೀರೋ

Public TV
2 Min Read

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಕನ್ನಡ ಸಾಹಸಿಗರೊಬ್ಬರ ಲೈಫ್‍ ಯೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಸಾಹಸಿಗ ಬೇರೆ ಯಾರೂ ಅಲ್ಲ ಕರ್ನಾಟಕದ ಖ್ಯಾತ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಎನ್ನುವುದು ವಿಶೇಷ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ಈ ಹಿಂದೆ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕನ್ನು ಆಧಿರಿಸಿ ಸುರರೈ ಪೊಟ್ರು ಸಿನಿಮಾವನ್ನು ತಮಿಳಿನಲ್ಲಿ ಮಾಡಲಾಗಿತ್ತು. ಗೋಪಿನಾಥ್ ಪಾತ್ರವನ್ನು ತಮಿಳಿನ ಖ್ಯಾತ ನಟ ಸೂರ್ಯ ನಿರ್ವಹಿಸಿದ್ದರು. ಇದೇ ಚಿತ್ರವನ್ನು ಹಿಂದಿಕೆ ರಿಮೇಕ್ ಮಾಡಲಾಗುತ್ತಿದೆ. ಸೂರ್ಯ ನಟಿಸಿದ್ದ ಪಾತ್ರವನ್ನೇ ಅಕ್ಷಯ್ ಇಲ್ಲಿ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ಗೋಪಿನಾಥ್ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದರೆ, ನಾಯಕಿಯಾಗಿ ರಾಧಿಕಾ ಮದನ್ ನಟಿಸುತ್ತಿದ್ದಾರೆ. ತಮಿಳಿನ ಸುರರೈ ಪೊಟ್ರು ಸಿನಿಮಾವನ್ನು ನಿರ್ದೇಶನದ ಮಾಡಿದ್ದ ಸುಧಾ ಕೊಂಗರ ಅವರೇ ಹಿಂದಿ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಇಂದಿನಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಅದ್ಧೂರಿಯಾಗಿಯೇ ಈ ಸಿನಿಮಾ ಕೂಡ ಮೂಡಿ ಬರಲಿದೆಯಂತೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

ಇಂದಿನಿಂದ ಶೂಟಿಂಗ್ ಶುರು ಮಾಡಿರುವ ವಿಷಯವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ಬಹಿರಂಗ ಪಡಿಸಿದ್ದು, ಚಿತ್ರೀಕರಣಕ್ಕೂ ಮುನ್ನ ತೆಂಗಿನ ಕಾಯಿ ಒಡೆಯುವ  ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′

ಗೋಪಿನಾಥ್ ಅವರ ಬದುಕಿನ ಕುರಿತಾಗಿ ಬಿಡುಗಡೆ ಆಗಿರುವ ಸಿಂಪ್ಲಿ ಫೈ ಕೃತಿಯಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿದ್ದು, ಭಾರತದ ವಾಯುಸೇನೆಯಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ದ ಹಾಸನದ ಮೂಲದವರಾದ ಗೋಪಿನಾಥ್ ನ ಬದುಕನ್ನು ಈ ಸಿನಿಮಾದ ಮೂಲಕ ತೆರೆದಿಟ್ಟಿದ್ದರು ನಿರ್ದೇಶಕಿ ಸುಧಾ. ತಮಿಳಿನಲ್ಲಿ ಈ ಸಿನಿಮಾದ ಅದ್ಭುತ ಯಶಸ್ಸು ಕಂಡಿತ್ತು. ಹೀಗಾಗಿ ಹಿಂದಿ ಸಿನಿಮಾದ ಬಗ್ಗೆಯೂ ಈಗಿನಿಂದಲೇ ನಿರೀಕ್ಷೆ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *