– ಬಹುಮತದತ್ತ ಎನ್ಡಿಎ; ಬಿಜೆಪಿ ವಂಚನೆಯ ಪಕ್ಷ ಎಂದ ಅಖಿಲೇಶ್ ಯಾದವ್
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಎನ್ಡಿಎ ಬಹುಮತದ ಸನಿಹದಲ್ಲಿದೆ. ಫಲಿತಾಂಶ ಕುರಿತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (Akhilesh Yadav) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ಆಯೋಗ ನಡೆಸಿದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಅಖಿಲೇಶ್ ವಾಗ್ದಾಳಿ ನಡೆಸಿದ್ದಾರೆ. ಈ ಎಸ್ಐಆರ್ ಆಟ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ನಡೆಯುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್ ಉಡೀಸ್ ಮಾಡಲು ಪಕ್ಕಾ ಪ್ಲ್ಯಾನ್- ಕಮಲ ಗೆಲುವಿನ ಹಿಂದಿದೆ ಕ್ಯಾಂಪೇನ್ ಕಮಾಲ್
बिहार में जो खेल SIR ने किया है वो प. बंगाल, तमिलनाडू, यूपी और बाक़ी जगह पर अब नहीं हो पायेगा क्योंकि इस चुनावी साज़िश का अब भंडाफोड़ हो चुका है। अब आगे हम ये खेल, इनको नहीं खेलने देंगे।CCTV की तरह हमारा ‘PPTV’ मतलब ‘पीडीए प्रहरी’ चौकन्ना रहकर भाजपाई मंसूबों को नाकाम करेगा।…
— Akhilesh Yadav (@yadavakhilesh) November 14, 2025
ಬಿಹಾರ ಫಲಿತಾಂಶ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಹಾರದಲ್ಲಿ ಎಸ್ಐಆರ್ ಆಡಿದ ಆಟ ಇನ್ಮುಂದೆ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ಅಥವಾ ಬೇರೆಡೆ ನಡೆಯಲ್ಲ. ಏಕೆಂದರೆ ಈ ಚುನಾವಣಾ ಪಿತೂರಿ ಈಗ ಬಹಿರಂಗಗೊಂಡಿದೆ ಎಂದು ಎನ್ಡಿಎಗೆ ತಿರುಗೇಟು ನೀಡಿದ್ದಾರೆ.
ಇನ್ಮುಂದೆ ಈ ಆಟ ಆಡಲು ಬಿಜೆಪಿಯವರಿಗೆ ನಾವು ಬಿಡುವುದಿಲ್ಲ. ನಾವು ಜಾಗರೂಕರಾಗಿ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸುತ್ತೇವೆ. ಬಿಜೆಪಿ ಪಕ್ಷವಲ್ಲ, ಬದಲಿಗೆ ಅದು ವಂಚನೆಯ ಪಕ್ಷ ಎಂದು ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಫಲಿತಾಂಶದಲ್ಲಿ ಎನ್ಡಿಎ 200, ಮಹಾಘಟಬಂಧನ್ 37, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎರಡು ಹಂತದಲ್ಲಿ 243 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದನ್ನೂ ಓದಿ: ಚುನಾವಣಾ ಚಾಣಕ್ಯ ಅಮಿತ್ ಶಾ ಭವಿಷ್ಯ ಮತ್ತೆ ನಿಜವಾಯ್ತು
