ಪತ್ನಿಯ ಅಣ್ಣನ ಮಗಳಿಗೆ ಆಸ್ತಿ ಬರೆದಿಟ್ಟು ದಂಪತಿ ನೇಣಿಗೆ ಶರಣು

Public TV
1 Min Read

ಮಂಗಳೂರು: ವೃದ್ಧ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ತಾಲೂಕಿನ ಕೋಟೆಕಾರಿನ ಬೀರಿಯಲ್ಲಿ ನಡೆದಿದೆ.

ದೇವರಾಜ್(74), ವಸಂತಿ(64) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ. ಮೂಲತಃ ಮಂಜೇಶ್ವರದವರಾಗಿರುವ ದೇವರಾಜ್ ಗಾಣಿಗ ಅವರು ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದರು. ಇವರು ಆಕಾಶವಾಣಿಯ ನಿವೃತ್ತ ಉದ್ಯೋಗಿಯಾಗಿದ್ದಾರೆ.

ಮೃತ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಈ ವಿಚಾರದಿಂದ ಅವರು ಸಾಕಷ್ಟು ನೊಂದಿದ್ದರು. ಅಲ್ಲದೆ ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ದಂಪತಿ ಇದೀಗ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ತಮ್ಮ ಆಸ್ತಿಯನ್ನು ವಸಂತಿ ಅವರ ಅಣ್ಣನ ಮಗಳ ಹೆಸರಿಗೆ ಬರೆದಿದ್ದಾರೆ. ಇನ್ನು ಮುಂದೆ ನಾಯಿಯ ಜವಾಬ್ದಾರಿ ಕೂಡ ಆಕೆಗೆ ವಹಿಸಲಾಗುತ್ತದೆ ಎಂದು ಡೆತ್ ನೋಟಿನಲ್ಲಿ ದಂಪತಿ ಉಲ್ಲೇಖಿಸಿದ್ದಾರೆ.

ಮೃತ ವಸಂತಿ ಸಹೋದರ ಎಂದಿನಂತೆ ಇಂದು ಕೂಡ ಬೆಳಗ್ಗೆ ಹಾಲು ಕೊಡಲೆಂದು ಬಂದಾಗ ಆತ್ಮಹತ್ಮೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಉಳ್ಳಾಲ ಠಾಣಾ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *