ಶ್ರೀನಿವಾಸಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ: ಎಸ್.ಆರ್.ವಿಶ್ವನಾಥ್

Public TV
1 Min Read

ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸಗೌಡರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

ರಮಡ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿ ಉತ್ತರ ನೀಡದಿರಲು ಕಾರಣ ಬೇರೆ ಇತ್ತು. ವಿಶ್ವಾಸಮತ ಯಾಚನೆಯಾಗುವುದು ಬಹಳ ಮುಖ್ಯವಾಗಿತ್ತು. ಹೀಗಾಗಿ ಸದನದಲ್ಲಿ ಉತ್ತರಿಸಲಿಲ್ಲ. ಈ ಕುರಿತು ಸಭಾದ್ಯಕ್ಷರಿಗೆ ಹಕ್ಕುಚ್ಯುತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ನಾವು ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದೇವೆ ಎಂದು ಸದನದಲ್ಲೇ ಆರೋಪಿಸಿದ್ದಾರೆ. ಈ ಕುರಿತು ಶ್ರೀನಿವಾಸಗೌಡ ವಿರುದ್ಧ ಸೋಮವಾರ ಇಲ್ಲವೆ ಮಂಗಳವಾರ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣ ರದ್ದಾದ ಮೇಲೂ ಈ ರೀತಿ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ನಾವು ಅವರಿಗೆ ದುಡ್ಡು ಕೊಟ್ಟಿರೋದಕ್ಕೆ ಸಾಕ್ಷಿ ನೀಡಲಿ. ಇಂತಹ ಹೇಳಿಕೆಗಳ ಮೂಲಕ ಕಲಾಪವನ್ನು ಅಡ್ಡದಾರಿಗೆ ಎಳೆಯಲು ಮುಂದಾಗಿದ್ದಾರೆ. ಕಲಾಪವನ್ನು ಒಂದು ದಿನ ಮುಂದೆ ಹಾಕಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂದು ಹರಿಹಾಯ್ದರು. ಸೋಮವಾರ ಸಭಾಧ್ಯಕ್ಷರು ರೂಲಿಂಗ್ ನೀಡಿದ್ದಾರೆ, ರೂಲಿಂಗ್ ತಪ್ಪುವುದಿಲ್ಲ ಎಂಬ ಭರವಸೆ ಇದೆ ಎಂದು ಇದೇ ವೇಳೆ ತಿಳಿಸಿದರು.

ಏನಿದು 5 ಕೋಟಿ ರಾದ್ಧಾಂತ ?
ಆಪರೇಷನ್ ಕಮಲ ಮಾಡುವುದಕ್ಕಾಗಿ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ ಹಾಗೂ ಎಸ್.ಆರ್.ವಿಶ್ವನಾಥ್ ಅವರು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದರು. ಸ್ವತಃ ಇಬ್ಬರೂ ಶಾಸಕರು ನಮ್ಮ ಮನೆಗೆ ಹಣ ಕಳುಹಿಸಿದ್ದರು ಎಂದು ಶ್ರೀನಿವಾಸಗೌರ ಅವರು ಈ ಹಿಂದೆ ಮಾತ್ರವಲ್ಲದೆ, ಶುಕ್ರವಾರ ಸದನದಲ್ಲಿಯೂ ಹೆಸರು ಸಮೇತ ಪ್ರಸ್ತಾಪಿಸಿದ್ದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ಧ್ವನಿಗೂಡಿಸಿ, ಇದಕ್ಕಿಂತ ಉದಾಹರಣೆ ಬೇಕೆ? ಆನ್ ರೆಕಾರ್ಡ್ ಸದನದಲ್ಲಿ ಶಾಸಕರೊಬ್ಬರು ಹೆಸರು ಸಮೇತ ಆಪರೇಷನ್ ಕಮಲದ ವಿವರ ನೀಡಿದ್ದಾರೆ ಎಂದು ಗದ್ದಲ ಎಬ್ಬಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *