ಬೆಂಗ್ಳೂರಾಯ್ತು, ಈಗ ಮಂಡ್ಯದಲ್ಲೂ ನಮ್ಮ ಅಪ್ಪಾಜಿ ಕ್ಯಾಂಟೀನ್: 10 ರೂ.ಗೆ ಊಟ ಮಾಡಿ ಖುಷಿಪಟ್ಟ ಮಂಡ್ಯ ಜನ

Public TV
1 Min Read

ಮಂಡ್ಯ: ಬಡವರಿಗೆ ಅನುಕೂಲವಾಗಲಿ ಅಂತಾ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಅಭಿಮಾನಿಗಳು ಮಂಡ್ಯದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಪ್ರಾರಂಭ ಮಾಡಿದ್ದು, ಕೇವಲ ಐದು ರೂಪಾಯಿ, ಹತ್ತು ರೂಪಾಯಿಗೆ ತಿಂಡಿ, ಊಟ ನೀಡುತ್ತಿದ್ದಾರೆ.

ಇದೀಗ ಮಂಡ್ಯದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟಿನ್ ಓಪನ್ ಆಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅಭಿಮಾನಿಗಳಾದ ಶಂಕರಮಠ ನಾಗೇಶ್, ಗೊರವಾಲೆ ನಾಗೇಶ್ ಕ್ಯಾಂಟಿನ್ ಆರಂಭಿಸಿದ್ದಾರೆ. ಮಂಡ್ಯದ ಮಹಾವೀರ ವೃತ್ತದ ಬಳಿ ಕ್ಯಾಂಟಿನ್ ಆರಂಭಗೊಂಡಿದ್ದು, ಕೇವಲ 5 ರೂಪಾಯಿ ಮತ್ತು 10 ರೂಪಾಯಿಗೆ ಊಟ, ತಿಂಡಿ ನೀಡುತ್ತಿದ್ದಾರೆ. ಇಡ್ಲಿಗೆ ಐದು ರೂಪಾಯಿ, ಒಂದು ವಡೆಗೆ ಐದು ರೂಪಾಯಿ, ಎರಡು ಬಜ್ಜಿಗೆ ಐದು ರೂಪಾಯಿ ನಿಗದಿ ಮಾಡಲಾಗಿದೆ. ಅದೇ ರೀತಿ ರೈಸ್‍ಬಾತ್, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್, ಎರಡು ಖಾಲಿ ದೋಸೆಗೆ ಪ್ರತ್ಯೇಕವಾಗಿ ಹತ್ತು ರೂಪಾಯಿ ನಿಗದಿ ಮಾಡಲಾಗಿದೆ.

ಬಡವರಿಗೆ ಅನುಕೂಲವಾಗಲಿ ಅಂತಾ ದೇವೇಗೌಡ ಅವರ ಮೇಲಿನ ಅಭಿಮಾನದಿಂದ ಕ್ಯಾಂಟಿನ್ ಪ್ರಾರಂಭ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಇಲ್ಲಿ ಊಟ, ತಿಂಡಿ ಸಿಗಲಿದೆ. ಕ್ಯಾಂಟಿನ್ ಆರಂಭದ ದಿನ ಜಮಾಯಿಸಿದ ಮಂಡ್ಯದ ಜನ, ಸರದಿಯಲ್ಲಿ ನಿಂತು ಐದು ರೂಪಾಯಿ, ಹತ್ತು ರೂಪಾಯಿ ಕೊಟ್ಟು ಊಟ ಮಾಡಿ ಖುಷಿ ಪಟ್ರು.

ಬೆಂಗಳೂರಿನಲ್ಲಿ ಇದೇ ವರ್ಷ ಆಗಸ್ಟ್ ನಲ್ಲಿ ಕಾಂಗ್ರೆಸ್ ಇಂದಿರಾ ಕ್ಯಾಂಟಿನ್ ಆರಂಭಿಸುವುದಕ್ಕೂ ಮುನ್ನವೇ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲಾಗಿತ್ತು.

ಇದನ್ನೂ ಓದಿ: ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

ಇದನ್ನೂ ಓದಿ: 2 ರೂ.ಗೆ ಟೀ, ಕಾಫಿ,-5 ರೂ.ಗೆ ತಿಂಡಿ, ಊಟ-ಇದು ಸ್ವಾಮಿ ಕ್ಯಾಂಟೀನ್ ಸ್ಪೆಷಲ್

Share This Article
Leave a Comment

Leave a Reply

Your email address will not be published. Required fields are marked *