ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

Public TV
1 Min Read

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಗ್ರ್ಯಾಂಡ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಯುಕ್ತ ಹೆಗ್ಡೆ ಆ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ತಮಿಳು, ತೆಲುಗು ಸಿನಿಮಾ ರಂಗಕ್ಕೂ ಹೋಗಿ ಬಂದರು. ಸಿನಿಮಾಗಳಿಗಿಂತಲೂ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾದರು. ಮತ್ತೆ ಇದೀಗ ಎಲ್ಲವನ್ನೂ ಮರೆಸುವಂತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕ್ರೀಮ್ ಸೇರಿದಂತೆ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ ಕ್ರೀಮ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ನೆನ್ನೆಯವರೆಗೂ ಸಂಯುಕ್ತಾ ಇದೇ ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಫೈಟ್ ಮಾಸ್ಟರ್ ಪ್ರಭು ಎನ್ನುವವರು ನಟಿಗೆ ಡ್ಯೂಪ್ ಬಳಸಲು ಹೇಳಿದರೂ, ಕೇಳದೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಎಗರಿಸಿ ಒದೆಯುವ ದೃಶ್ಯದಲ್ಲಿ ಅವರಿಗೆ ಕಾಲು ಟ್ವಿಸ್ಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದೇಶಕರು ಹೇಳಿದ ಮಾತು ಕೇಳದೇ ಇರುವ ಕಾರಣಕ್ಕಾಗಿ ಈ ರೀತಿ ಆಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಇದನ್ನೂ ಓದಿ:ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

ಹಾಗಂತ ನಟಿಯೇನೂ ಹಠಮಾರಿತನ ಮಾಡಿಲ್ಲ. ಆದಷ್ಟು ದೃಶ್ಯವು ನೈಜವಾಗಿಯೇ ಬರಲಿ ಎನ್ನುವುದು ಸಂಯುಕ್ತಾರ ಆಸೆಯಾಗಿತ್ತಂತೆ. ಅಲ್ಲದೇ, ಈ ಹಿಂದೆಯೂ ಇವರು ಡ್ಯೂಪ್ ಇಲ್ಲದೇ ಹಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರಿಂದ, ಆ ಧೈರ್ಯದಿಂದಲೇ ಇಲ್ಲಿಯೂ ಡ್ಯೂಪ್ ಬಳಸಲು ನಿರಾಕರಿಸಿದ್ದಾರಂತೆ. ಕಾಲು ಟ್ವಿಸ್ಟ್ ಆಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಹಲವು ದಿನಗಳ ಕಾಲ ರೆಸ್ಟ್ ತಗೆದುಕೊಳ್ಳಬೇಕಾಗಿದೆ. ಅಂದಹಾಗೆ ಈ ಸಿನಿಮಾವನ್ನು ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿದ್ದು, ಡಿ ಕೆ. ದೇವೇಂದ್ರ ನಿರ್ಮಾಪಕರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *