ತಲೆಗೆ ಹುಳ ಬಿಡುವಂಥಹ ಪೋಸ್ಟ್ ಹಾಕೋದ್ರಲ್ಲಿ ಸಮಂತಾ ಎತ್ತಿದೆ ಕೈ. ಇದೀಗ ಹೀರೋ ವಿಲನ್ನು ಎನ್ನುತ್ತಾ ವಿಚಿತ್ರ ಪೋಸ್ಟ್ನ್ನ ಇನ್ಸ್ಟಾಗ್ರಾಂನಲ್ಲಿ ಸಮಂತಾ ಪೋಸ್ಟ್ ಮಾಡಿದ್ದಾರೆ. ಜನರಂತೂ ಸಮಂತಾಗೆ ಕೆಲಸ ಇಲ್ಲದಿರೋದಕ್ಕೆ ಹೀಗೆಲ್ಲಾ ಯೋಚಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ. ಅಷ್ಟಕ್ಕೂ ಸ್ಯಾಮ್ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಸಮಂತಾಗೆ (Samantha) ಈಗ ಸಿಕ್ಕಾಪಟ್ಟೆ ಸಮಯವಿದೆ. ಸಮಯ ಇದ್ದಾಗಲೂ ಇಲ್ಲದಿದ್ದಾಗ್ಲೂ ಜಾಲತಾಣದಲ್ಲಿ ಸ್ಯಾಮ್ ಫುಲ್ ಆ್ಯಕ್ಟೀವ್. ಎಷ್ಟು ಅಂದ್ರೆ ದಿನಕ್ಕೊಂದು ಪೋಸ್ಟ್ ಹಾಕದಿದ್ರೆ ಸ್ಯಾಮ್ಗೆ ತಿಂದಿದ್ದು ಕರಗೋಲ್ಲ ಎಂಬ ಹಣೆಪಟ್ಟಿಯನ್ನೇ ನೆಟ್ಟಿಗರು ಕೊಟ್ಟಿದ್ದಾರೆ. ತಲೆಗೆ ಕೆಲಸ ಕೊಡುವ ಪೋಸ್ಟ್ಗಳನ್ನ ಹಾಕುವ ಸಮಂತಾ ಇದೀಗ ಅಂಥದ್ದೇ ಒಂದು ಪೋಸ್ಟ್ ಮಾಡಿ ಯಾರನ್ನೋ ಬೆರಳು ಮಾಡಿ ತೋರಿಸುತ್ತಿರುವಂತಿದೆ. ಇದನ್ನೂ ಓದಿ:2 ವರ್ಷಗಳ ನಂತರ ಕಿರುತೆರೆಗೆ ಮರಳಿದ ಶಾಂಭವಿ ವೆಂಕಟೇಶ್
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಮಂತಾ ನೈತಿಕತೆಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿರಳೆಯನ್ನ ಕೊಂದರೆ ಹೀರೋ ಅಂತಾರೆ. ಅದೇ ಚಿಟ್ಟೆಯನ್ನ ಕೊಂದ್ರೆ ವಿಲನ್ ಅಂತಾರೆ ಎಂದಿದ್ದಾರೆ. ಇಲ್ಲಿ ಯಾರು ವಿಲನ್ ಯಾರು ಹೀರೋ. ಹೀಗೆ ವಿಚಿತ್ರ ಪೋಸ್ಟ್ಗಳನ್ನ ಯಾಕ್ ಹಾಕ್ತಿದ್ದಾರೆ ಎಂಬ ಥರ ಥರದ ಕಾಮೆಂಟ್ಗಳ ಸುರಿಮಳೆ ಬರ್ತಿದೆ. ಕೆಲವರು ಸಮಂತಾಗೆ ಮಾಡೋಕೆ ಕೆಲಸ ಇಲ್ಲವಲ್ಲ ಅದಕ್ಕಾಗೇ ಹೀಗೆಲ್ಲಾ ಪೋಸ್ಟ್ ಹಾಕ್ತಾರೆ ಎಂದಿದ್ದಾರೆ. ಅಷ್ಟಕ್ಕೂ ಸ್ಯಾಮ್ ಯಾರ ಮೇಲೆ ಗರಂ ಆಗಿ ಹೀಗೆಲ್ಲಾ ಪೋಸ್ಟ್ ಮಾಡಿದ್ರೋ ಮುಂದ್ಯಾವತ್ತಾದ್ರೂ ರಿವೀಲ್ ಆಗುತ್ತಾ ನೋಡ್ಬೇಕು.
ಸದ್ಯ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಖುಷಿ’ (Kushi) ಸಿನಿಮಾ ಮುಗಿಸಿಕೊಟ್ಟು, ಅನಾರೋಗ್ಯದ ಸಮಸ್ಯೆಯಿಂದ ಚಿತ್ರೀಕರಣಕ್ಕೆ ಒಂದು ವರ್ಷ ಬ್ರೇಕ್ ಹೇಳಿದ್ದಾರೆ. ಆರೋಗ್ಯ ಸುಧಾರಣೆಯ ಬಳಿಕ ಸ್ಯಾಮ್ ಮತ್ತೆ ಬಣ್ಣ ಹಚ್ಚಲಿದ್ದಾರೆ.