ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ

Public TV
0 Min Read

– ಡ್ಯಾಡಿ, ಅಂಕಲ್‌ಗೆ ವಿಷಯ ತಿಳಿಸಿ: ಸಿಬ್ಬಂದಿ ಬಸವರಾಜ್‌ಗೆ ಹೇಳಿದ್ದ ರನ್ಯಾ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಕೇಸ್‌ನಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ. ಚಿನ್ನ ಕಳ್ಳಸಾಗಾಟದಲ್ಲಿ ಏರ್‌ಪೋರ್ಟ್‌ನಲ್ಲಿ ಅರೆಸ್ಟ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು.

ಏರ್‌ಪೋರ್ಟ್‌ನಲ್ಲಿ ಡಿಆರ್‌ಐಗೆ ಲಾಕ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು. ‘ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ನನ್ನಿಂದ ತಪ್ಪಾಯ್ತು. ಡ್ಯಾಡಿ, ಅಂಕಲ್‌ಗೆ ಕಾಲ್ ಮಾಡಿ ತಿಳಿಸು’ ಎಂದು ಕಣ್ಣೀರಿಡುತ್ತ ಪ್ರೋಟೊಕಾಲ್ ಸಿಬ್ಬಂದಿ ಬಸವರಾಜ್‌ಗೆ ನಟಿ ರನ್ಯಾ ಹೇಳಿದ್ದರಂತೆ.

ಅರೆಸ್ಟ್ ಆಗುತ್ತಿದ್ದಂತೆ ಸಿಬ್ಬಂದಿ ಬಸವರಾಜ್ ಮುಂದೆ ನಟಿ ರನ್ಯಾ ಗಳಗಳನೆ ಅತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

Share This Article