ದೇವಸ್ಥಾನ ಪ್ರವೇಶ ವೇಳೆ ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದರು-‘ನೀಲಕಂಠ’ ನಟಿ ನಮಿತಾ

Public TV
1 Min Read

ನ್ನಡದ ‘ನೀಲಕಂಠ’ (Neelakanta Kannada Film) ಚಿತ್ರದ ನಟಿ ನಮಿತಾ (Namitha) ಅವರು ತಮಿಳುನಾಡಿದ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಅಹಿತಕರ ಘಟನೆಯೊಂದು ನಡೆದಿದೆ. ದೇಗುಲ ಪ್ರವೇಶದ ವೇಳೆ ಯಾವ ಧರ್ಮದವರು ಜಾತಿ ಪ್ರಮಾಣಪತ್ರ ತೋರಿಸಿ ಎಂದು ಒಳಪ್ರವೇಶಿಸದಂತೆ ತಡೆದಿದ್ದಾರೆ. ಕಹಿ ಘಟನೆಯ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ, ನೀವು ಹಿಂದೂ ನಾ ಎಂದು ಆಡಳಿತ ಮಂಡಳಿ ಸಿಬ್ಬಂದಿ ನನ್ನನ್ನು ತಡೆದಿದ್ದಾರೆ. ನಾನು ಹಿಂದೂ ಎಂದು ತಿಳಿಸಿದರೂ ಕೂಡ ನೀವು ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದು ಕೇಳಿದ್ದಾರೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿವರಣೆ ನೀಡಿ, ಇದುವರೆಗೂ ನನ್ನ ಜೀವನದಲ್ಲಿ ಹೀಗೆ ಆಗಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಬಹುಭಾಷಾ ನಟಿ ನಮಿತಾ.

 

View this post on Instagram

 

A post shared by Namitha Vankawala (@namita.official)


ಬಳಿಕ ನಾವು ಹಿಂದೂ ಎಂದು ಸ್ಪಷ್ಟನೆ ನೀಡಿದ ನಂತರವೇ ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ನಮ್ಮನ್ನು ದೇವಸ್ಥಾನ ಒಳ ಪ್ರವೇಶಿಸಲು ಅನುಮತಿ ನೀಡಿದರು ಎಂದು ನಟಿ ನಮಿತಾ ತಿಳಿಸಿದ್ದಾರೆ.

ಅಂದಹಾಗೆ, ರವಿಚಂದ್ರನ್ (Ravichandran) ಜೊತೆ ನೀಲಕಂಠ, ಹೂ, ದರ್ಶನ್ (Actor Darshan) ಜೊತೆ ‘ಇಂದ್ರ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಮಿತಾ ನಟಿಸಿದ್ದಾರೆ.

Share This Article