ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

Public TV
1 Min Read

ಫ್ಯಾಟ್ ಸರ್ಜರಿಗೆ ಒಳಗಾಗಿ ಕಿರುತೆರೆ ನಟಿ ಚೇತನಾ ರಾಜ್ ಸಾವಿನ ನಂತರ ಬಾಡಿ ಶೇಮಿಂಗ್ ಕುರಿತು ಸ್ಯಾಂಡಲ್‌ವುಡ್ ನಟಿಯರು ದನಿಯೆತ್ತಿದ್ದಾರೆ. ರಮ್ಯಾ, ಪ್ರಿಯಾಂಕಾ ಉಪೇಂದ್ರ, ನಂತರ ಇದೀಗ `ಕೃಷ್ಣಲೀಲಾ’ ನಟಿ ಮಯೂರಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

ಕಿರುತೆರೆಯ `ಅಶ್ವಿನಿ ನಕ್ಷತ್ರ’ ಸೀರಿಯಲ್‌ನಿಂದ ಶುರುವಾದ ಬಣ್ಣದ ಬದುಕು, `ಕೃಷ್ಣಲೀಲಾ’, ಪೊಗರು ಚಿತ್ರದವರೆಗೂ ನಟಿ ಮಯೂರಿ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಲೇ ಬಂದಿದ್ದಾರೆ. ಈಗ ಯುವ ಚೇತನಾ ಸಾವಿಗೆ ನಟಿ ಮಯೂರಿ ಕೂಡ ಧ್ವನಿಗೂಡಿಸಿದ್ದಾರೆ. ಬಾಡಿ ಶೇಮಿಂಗ್ ವಿರುದ್ಧ ಮಯೂರಿ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಎಲ್ಲಾ ನಟಿಯರಿಗೂ ಸಾಕಷ್ಟು ರೀತಿಯಲ್ಲಿ ಸವಾಲುಗಳ ಎದುರಾಗಿರುತ್ತದೆ. ಆದರೆ, ನಮ್ಮನ್ನು ನಾವು ಪ್ರೀತಿಸುವುದು ಮುಖ್ಯ. ನಾವು ಹೇಗಿದ್ದೀವಿ ಅಂತಾ ನಾವು ಒಪ್ಪಿಕೊಂಡರೆ ಸಾಕು. ನಾಯಕಿಯರು ಮಾತ್ರ ಅಲ್ಲ, ಎಲ್ಲರೂ ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ನಾವು ಸಣ್ಣಗೆ ಅಥವಾ ದಪ್ಪಗೆ ಇದ್ದೇವೆ ಎಂಬ ರೀತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಜತೆಗೆ ಎಲ್ಲವನ್ನು ಎದುರಿಸಿ ನಿಲ್ಲಬೇಕು ಎಂದು ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಮಾತನಾಡಿದ್ದಾರೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

ನಟಿ ಮಯೂರಿ ಕೂಡ ಮದುವೆ, ಮಗು ಅಂತಾ ಬ್ಯುಸಿಯಿದ್ದರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಆಗೋಕೆ ಮಯೂರಿ ರೆಡಿಯಾಗ್ತಿದ್ದಾರೆ. ಸದ್ಯದಲ್ಲೇ ಒಂದೊಳ್ಳೆ ಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *