ದಾರಿತಪ್ಪಿದ ಮಗನಿಗೆ ಜೋಡಿಯಾದ ಕೆಂಡಸಂಪಿಗೆ!

Public TV
1 Min Read

ರಾಜ್ ಕುಮಾರ್ ಕುಟುಂಬದ ಕುಡಿಯೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರೋದರ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಪೂರ್ಣಿಮಾ ಮತ್ತು ರಾಮ್‍ಕುಮಾರ್ ಪುತ್ರ ಧೀರೇನ್ ದಾರಿತಪ್ಪಿದ ಮಗ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಆದರೆ ದಾರಿತಪ್ಪಿದ ಮಗನಿಗೆ ನಾಯಕಿ ಯಾರೆಂಬುದು ಮಾತ್ರ ಪ್ರಶ್ನೆಯಾಗುಳಿದಿತ್ತು. ಈಗ ಕೆಂಡಸಂಪಿಗೆಯ ಹುಡುಗಿ ಮಾನ್ವಿತಾ ಕಾಮತ್ ಧೀರೇನ್ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ!

ಇತ್ತೀಚೆಗಷ್ಟೇ ತಾರಕಾಸುರ ಚಿತ್ರದಲ್ಲಿ ನಟಿಸಿದ್ದ ಮಾನ್ವಿತಾ ಮರಾಠಿ ಚಿತ್ರರಂಗಕ್ಕೂ ಹಾರಿದ್ದಾರೆ. ಕನ್ನಡದಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ. ಹೀಗಿರೋವಾಗಲೇ ದಾರಿ ತಪ್ಪಿದ ಮಗನಿಗೂ ಅವರು ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿಯೂ ಕೂಡಾ ಮಾನ್ವಿತಾ ಮುದ್ದಾದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರ್‍ಯಾಂಬೋ 2 ಖ್ಯಾತಿಯ ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಕಥೆಗೆ ತಕ್ಕುದಾಗಿ ಧೀರೇನ್ ಕೂಡಾ ಈಗಾಗಲೇ ಸಾಕಷ್ಟು ತರಬೇತಿ ಪಡೆದು ರೆಡಿಯಾಗಿದ್ದಾರೆ. ಹೀರೋಗೆ ಬೇಕಾದ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುವ ಧೀರೇನ್ ಈ ಚಿತ್ರದ ಮೂಲಕ ನಾಯಕನಾಗಿ ನೆಲೆ ನಿಲ್ಲುವ ಭರವಸೆಯೊಂದಿಗೇ ಅದ್ಧೂರಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *