ಕನಸಿನ ಹುಡುಗನ ಬಗ್ಗೆ ಕೆಂಡಸಂಪಿಗೆ ಬೆಡಗಿಯ ಮನದಾಳದ ಮಾತು

Public TV
1 Min Read

ಬೆಂಗಳೂರು: ಪ್ರತಿಯೊಬ್ಬ ನಟಿ-ನಟರಿಗೆ ತಮ್ಮ ಹುಡುಗ ಮತ್ತು ಹುಡಗಿಯ ಬಗ್ಗೆ ಕನಸಿರುತ್ತದೆ. ಅದೇ ರೀತಿ ಕೆಂಡಸಂಪಿಗೆಯ ಬೆಡಗಿ ತಮ್ಮ ಹುಡುಗ ಹೇಗಿರಬೇಕು ಎಂಬುದುರ ಬಗ್ಗೆ ಮಾತನಾಡಿದ್ದಾರೆ.

ನಟಿ ಮಾನ್ವಿತಾ ಹರೀಶ್ `ಕೆಂಡಸಂಪಿಗೆ’ ಸಿನಿಮಾ ಮೂಲಕವೇ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಸಿನಿಮಾದ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈಗ ಅನೇಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಮಾನ್ವಿತಾ ಇಲ್ಲಿಯವರೆಗೂ ತಮ್ಮ ಮದುವೆ ಅಥವಾ ಮದುವೆಯಾಗುವ ಹುಡುಗನ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

`ಟಗರು’ ಯಶಸ್ಸಿನ ಸಂತಸದಲ್ಲಿರುವ ಮಾನ್ವಿತಾ ತನ್ನ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಹುಡುಗಿಯರು ಬಯಸುವಾಗೆ ಮಾನ್ವಿತಾ ಅವರಿಗೂ ಒಳ್ಳೆಯ ಗುಣ ಮತ್ತು ಮನಸ್ಸು ಇರುವ ಹುಡುಗ ಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಘನತೆ, ಗೌರವವುಳ್ಳ ಹುಡುಗ ಆದರೆ ಇನ್ನು ಒಳ್ಳೆದು ಎಂದು ಟಗರು ಬೆಡಗಿ ಹೇಳಿದ್ದಾರೆ.

ಮಾನ್ವಿತಾ ಹೆಚ್ಚು ಪುಸ್ತಕಗಳನ್ನು ಓದುತ್ತಾರೆ. ಆದ್ದರಿಂದ ಅವರು ಹೆಚ್ಚು ಪುಸ್ತಕಗಳನ್ನು ಓದುವ ಹುಡುಗರನ್ನು ಇಷ್ಟ ಪಡುತ್ತಾರೆ. ಜೊತೆಗೆ ಹೆಚ್ಚು ಹೆಚ್ಚು ವಿಚಾರಗಳ ಬಗ್ಗೆ ತಿಳಿದುಕೊಂಡಿರುಬೇಕು ಎಂದಿದ್ದಾರೆ. ಇನ್ನು ಹಾಡು ಬರೆಯುವುದಕ್ಕೂ ಬಂದರೂ ಉತ್ತಮ ಹಾಗು ಸಿನಿರಂಗದ ಬಗ್ಗೆ ತಿಳಿದುಕೊಂಡಿದ್ದರೆ ಅವರ ಜೊತೆಗೆ ನಾನು ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬುಹುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *