ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತೆ: ಯಶ್

Public TV
1 Min Read

ಬೆಂಗಳೂರು: ಈ ರೀತಿಯ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಖುಷಿಯಾಗಿದೆ. ಸಾಮಜಿಕ ಉದ್ದೇಶದಿಂದ ಯಶೋಮಾರ್ಗ ಹುಟ್ಟಿದೆ. ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತದೆ. ನನ್ನ ಜೀವನದಲ್ಲಿಯೂ ನನಗೆ ಅಂದರೆ ಬಾಲ್ಯದಲ್ಲಿ ಯಾರಾದ್ರೂ ಸಹಾಯ ಮಾಡ್ತಾರೆ ಅಂತಾ ಆಸೆಯಿತ್ತು. ಆದರೆ ಯಾರು ಬರಲಿಲ್ಲ ಎಂದು ನಟ ಯಶ್ ಬೆಳಕು ಕಾರ್ಯಕ್ರಮದಲ್ಲಿ ತಿಳಿಸಿದರು.

ಶಿಕ್ಷಣ, ಆರೋಗ್ಯ, ಆಹಾರ ಇವು ಜೀವನದಲ್ಲಿ ಬೇಕಾದ ಮುಖ್ಯ ಅವಶ್ಯಕತೆಗಳು. ಯಾವುದೇ ಒಂದು ಹಳ್ಳಿಗೆ ಹೋದ್ರೆ ಅಲ್ಲಿ ಒಂದು ಪೆಪ್ಸಿ ಮುಂತಾದ ಬ್ರಾಂಡೆಂಡ್ ಪಾನೀಯ ಸಿಗುತ್ತೆ, ಆದರೆ ಮುಖ್ಯವಾದ ಶಾಲೆ, ಆಸ್ಪತ್ರೆಯೇ ಸಿಗಲ್ಲ. ವಿದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತುಂಬಾ ಗೌರವ ಸಿಗುತ್ತೆ, ಆದರೆ ಖಾಸಗಿ ಶಾಲೆಗಳಲ್ಲಿ ಓದಿದ್ರೆ ಅಯ್ಯೋ ಪಾಪಾ ಅಂತಾ ಕರೀತಾರೆ. ಇದು ನಮ್ಮ ದೇಶದಲ್ಲಿ ತದ್ವೀರುದ್ಧವಾಗಿದೆ. ಇದು ನಮ್ಮಲ್ಲಿ ಬದಲಾಗಬೇಕಿದೆ ಎಂದು ಯಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಲವಾರು ಮಠಗಳು ಇಂದು ಶಿಕ್ಷಣವನ್ನು ನೀಡುತ್ತಿವೆ. ಕೇವಲ ಒಂದು ಮಠ ಮನಸ್ಸು ಮಾಡಿ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡ್ತಾಯಿವೆ. ಅದು ಯಾಕೆ ಸರ್ಕಾರದಿಂದ ಆಗ್ತಾಯಿಲ್ಲ ಎಂಬ ಪ್ರಶ್ನೆ ನನ್ನನ್ನ ಕಾಡುತ್ತದೆ ಎಂದು ಯಶ್ ಹೇಳಿದ್ರು.

ಬೆಳಕು ಕಾರ್ಯಕ್ರಮದ ಮೂಲಕ ಎಲ್ಲ ದಾರಿಗಳು ಸಿಗುತ್ತಿವೆ. ಬೆಳಕು ಕಾರ್ಯಕ್ರಮದ ಮೂಲಕ ಜಯದೇವ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡೊ ವಿಷಯ ಜನರಿಗೆ ಗೊತ್ತಾಗಿದೆ. ಸಹಾಯ ಬೇಕಾದ ಜನಕ್ಕೆ ಯಾರ ಬಳಿ ಕೇಳ್ಬೇಕು ಎಂಬುವುದು ಗೊತ್ತಿರಲ್ಲ. ಅಂತಹ ಕೆಲಸಕ್ಕೆ ಬೆಳಕು ಒಂದು ವೇದಿಕೆಯಾಗಿದೆ ಎಂದು ಯಶ್ ಮೆಚ್ಚುಗೆ ಸೂಚಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *