ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ ಸಲ್ಲಿಸಿ ಗುಣಗಾನ ಮಾಡಿದ ಯಶ್‌

Public TV
1 Min Read

500 ವರ್ಷಗಳ ಹೋರಾಟ ಮತ್ತು ಕಾಯುವಿಕೆ ಇಂದು (ಜ.22) ಅಂತ್ಯವಾಗಿದೆ. ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಸಂದರ್ಭದಲ್ಲಿ ‘ಕೆಜಿಎಫ್ 2’ (Kgf 2) ಸ್ಟಾರ್ ಯಶ್ (Yash) ಅವರು ಶ್ರೀರಾಮನಿಗೆ ಜೈ ಎಂದಿದ್ದಾರೆ. ನಮ್ಮೆಲ್ಲರಿಗೂ ಮಹಾದಿನ, ಮರ್ಯದಾ ಪುರುಷೋತ್ತಮ ರಾಮನಿಗೆ ನಮನ ಎಂದು ಯಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶ್ರೀರಾಮ ಕುರಿತು ಕವಿತೆ ಬರೆದು ಕೊಂಡಾಡಿದ ಕಿಚ್ಚ

 

View this post on Instagram

 

A post shared by Yash (@thenameisyash)

ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನಿಗೆ ನಮನ, ಧಾರ್ಮಿಕ ಜೀವನದ ದ್ಯೋತಕ, ಉದಾಹರಣೆಯ ಮೂಲಕ ಮುನ್ನಡೆಸು, ಸಂಬಂಧಗಳಿಗೆ ಪೂಜ್ಯಭಾವನೆ, ಪ್ರತಿಕೂಲತೆಯಲ್ಲಿ ದೃಢತೆ ಮತ್ತು ಮಿತಿಯಿಲ್ಲದ ಸಹಾನುಭೂತಿ. ನಮಗೆಲ್ಲರಿಗೂ ನಿಜಕ್ಕೂ ಇಂದು ಮಹಾಕಾವ್ಯದ ದಿನ ಎಂದಿದ್ದಾರೆ. ಜೈ ಶ್ರೀ ರಾಮ್ ಎಂದು ನಟ ಯಶ್ (Yash) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಯೋಧ್ಯೆಯ ಇಂದಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕನ್ನಡದ ರಿಷಬ್ ಶೆಟ್ಟಿ (Rishab Shetty), ಬಾಲಿವುಡ್ ನಟಿ ಕಂಗನಾ, ಅನುಪಮ್ ಖೇರ್, ಆಲಿಯಾ- ರಣ್‌ಬೀರ್ ದಂಪತಿ, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಕನ್ನಡದ ನಟ ಯಶ್, ಸುದೀಪ್ ಸೇರಿದಂತೆ ಅನೇಕರು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Share This Article