ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ನಟ ವಿನೋದ್ ರಾಜ್

Public TV
1 Min Read

ಟ ವಿನೋದ್ ರಾಜ್ (Vinod Raj) ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ (Ramzan) ಹಬಕ್ಕೆ ಮಸೀದೆಗೆ ತೆರಳಿ, ಹಣ್ಣು ಹಂಪಲ ನೀಡಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.

ನೆಲಮಂಗಲದ ದರ್ಗಾಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಿ ಶುಭಾಷಯ ವಿನಿಮಯ ಮಾಡಿಕೊಂಡು ಅಮ್ಮನನ್ನು ನೆನೆದಿದ್ದಾರೆ. ಪ್ರತಿ ವರ್ಷವೂ ರಂಜಾನ್ ತಿಂಗಳಲ್ಲಿ ದರ್ಗಾಗೆ ತೆರಳುವ ನಟ, ಪ್ರತಿ ವರ್ಷ ರಂಜಾನ್ ವೇಳೆ ತಾಯಿಯೊಂದಿಗೆ ರಂಜಾನ್ ಆಚರಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

 

ತಾಯಿ ಲೀಲಾವತಿ ಇಲ್ಲದೆ ಈ ವರ್ಷ ಮುಸ್ಲಿಂ ಬಾಂಧವರ ಜತೆ ರಂಜಾನ್ ಆಚರಣೆ ಮಾಡಿದ್ದಾರೆ. ಈ ಮೂಲಕ ಅವರು ಮಾನವೀಯತೆಯ ಸಂದೇಶ ಸಾರಿದ್ದಾರೆ.

Share This Article